ಜಯನಗರ ಅಪಾಯಕಾರಿ ಮರಗಳ ತೆರವಿನ ಬಗ್ಗೆ ಪರಿಶೀಲನೆ

0

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಜಯನಗರ 3ನೇ ವಾರ್ಡಿನಲ್ಲಿ ರಸ್ತೆ ಬದಿಯ ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಬಗ್ಗೆ ನಗರ ಪಂಚಾಯತ್ ಸದಸ್ಯರಾದ ಶ್ರೀಯುತ ಬಾಲಕೃಷ್ಣ ಭಟ್ ಕೊಡಕೇರಿ ಯವರು ಸಂಬಂಧಪಟ್ಟ ಇಲಾಖೆಗಳನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದು ಈ ಹಿನ್ನೆಲೆಯಲ್ಲಿ ಜುಲೈ 30ರಂದು ಡಿ ವೈ ಆರ್ ಎಫ್ ಒ ಸಂದೀಪ್ ಹಾಗೂ ಸಿಬ್ಬಂದಿ 3ನೇ ವಾರ್ಡ್ ಗೆ ಭೇಟಿಕೊಟ್ಟು ಅಪಾಯಕಾರಿ ಮರಗಳ ಬಗ್ಗೆ ಮಾಹಿತಿ ಪಡೆದು ಸ್ಥಳ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ನಗರ ಪಂಚಾಯತ್ 3ನೇ ವಾರ್ಡಿನ ಸದಸ್ಯರಾದ ಶ್ರೀಯುತ ಬಾಲಕೃಷ್ಣ ಭಟ್ ಕೊಡೆಂಕೇರಿ, ದೃಷ್ಟಿ ಚಾರಿಟೇಬಲ್ ಟ್ರಸ್ಟ್ ಸ್ಥಾಪಕ ಕಾರ್ಯದರ್ಶಿಯಾಗಿರುವ ಶ್ರೀ ಸಂತೋಷ್ ಕೊಡಕೇರಿ, ಸಮಾಜ ಸೇವಕ ಹಾಗೂ ಸುದ್ದಿ ಪತ್ರಿಕೆಯ ಪ್ರತಿನಿಧಿ ನವೀನ್ ಮಚಾದೊ ಜಯನಗರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.