ಸುಳ್ಯ ಕೃಷಿ ಇಲಾಖೆಯಲ್ಲಿ ಸುರಕ್ಷಿತ ಕೀಟನಾಶಕ ಬಳಕೆ ಕುರಿತು ತರಬೇತಿ

0

2024-25ನೇ ಸಾಲಿನಲ್ಲಿ ರೈತ ಸಂಪರ್ಕ ಕೇಂದ್ರ ಸುಳ್ಯ ದಲ್ಲಿ ಬೀಜೋಪಚಾರ ಹಾಗೂ ಸುರಕ್ಷಿತ ಕೀಟನಾಶಕ ಬಳಕೆ ಕುರಿತು ತರಬೇತಿ ಕಾರ್ಯಕ್ರಮವನ್ನು ಜು.31ರಂದು ಹಮ್ಮಿಕೊಳ್ಳಲಾಯಿತು.

ಸಹಾಯಕ ಕೃಷಿ ನಿರ್ದೇಶಕರಾಗಿರುವ ಗುರುಪ್ರಸಾದ್ ಇವರು ಬೀಜೋಪಚಾರ ಹಾಗೂ ಸುರಕ್ಷಿತ ಕೀಟನಾಶಕ ಬಳಕೆ ಕುರಿತು ಮಾಹಿತಿ ನೀಡಿದರು. ಸಹಾಯಕ ತೋಟಗಾರಿಕೆ ಅಧಿಕಾರಿಯವರಾದ ಅರಬಣ್ಣ ಪೂಜೆರ್ ಇವರು ತೋಟಗಾರಿಕೆ ಬೆಳೆ ಹಾಗೂ ರೋಗಗಳು ಹಾಗೂ ಹತೋಟಿ ಕ್ರಮಗಳ ಕುರಿತು ಮಾಹಿತಿ ನೀಡಿದರು. ತಾಲ್ಲೂಕು NRLM ಆಗಿರುವ ಶ್ರೀಮತಿ ಶ್ವೇತಾ ಇವರು ಕೀಟನಾಶಕಗಳಲ್ಲಾಗಲಿ, ಸೇವಿಸುವ ಆಹಾರಗಳಲ್ಲಾಗಲಿ, ಕಲಬೆರಕೆ ಆಗದಂತೆ ಎಚ್ಚರವಹಿಸಿ ಎಂಬಂತೆ ತಿಳಿಸಿದರು. ಕೃಷಿ ಸಖಿಯರು ಹಾಗೂ ರೈತರು ಸೇರಿದಂತೆ ಸುಮಾರು 60 ಜನರು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.