ವಯನಾಡ್ ದುರಂತ ಸ್ಥಳದಲ್ಲಿ ರಕ್ಷಣಾ ಕಾರ್ಯದಲ್ಲಿ ಸುಳ್ಯ ಎಸ್ ವೈ ಎಸ್ ಇಸಾಬ ತಂಡದ ಸದಸ್ಯರು ಭಾಗಿ

0

ಕೇರಳದ ವಯನಾಡ್ ನಲ್ಲಿ ಸಂಭವಿಸಿದ ದುರಂತ ಸ್ಥಳದಲ್ಲಿ ಸುಳ್ಯದ ಎಸ್ ವೈ ಎಸ್ ಇಸಾಬ ತಂಡದ ಸದಸ್ಯರು ಒಂದು ದಿನದ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.

ಮುಂಡಕೈ ಎಂಬಲ್ಲಿ ಮಸೀದಿ ಯೊಂದರ ದರ್ಮಗುರುಗಳ ಮೃತ ದೇಹ ಸಹಿತ ಸುಮಾರು 10 ಮೃತ ದೇಹಗಳನ್ನು ಇವರ ತಂಡ ಅವಶೇಷಗಳಡಿಯಿಂದ ಮೇಲಕ್ಕೆತ್ತುವಲ್ಲಿ ಸಹಕಾರಿ ಯಾಗಿದ್ದಾರೆ.

ಇಸಾಬ ತಂಡದಲ್ಲಿ ಸದಸ್ಯರುಗಳಾದ ಸಿದ್ದೀಕ್ ಗೂನಡ್ಕ ಇವರ ನೇತೃತ್ವದಲ್ಲಿ ಹಳೆಗೇಟು ಬಿ ಎಂ ಎ ಫ್ರೋಟ್ಸ್ ಇದರ ಮಾಲಕ ರಫೀಕ್ ಬಿ ಎಂ,ಅಚ್ಚು ಸಾಹುಕಾರ್,ಶಮೀರ್ ಕಾಣಿಯೂರು,ಹಾರೀಸ್ ಗೂನಡ್ಕ,ಹಸನ್ ದೊಡ್ಡಡ್ಕ, ಮೊದಲಾದವರು ಪಾಲ್ಗೊಂಡರು.

ಸಕಾಲದಲ್ಲಿ ದುರಂತ ಸ್ಥಳಕ್ಕೆ ಧಾವಿಸಿ ರಕ್ಷಣಾ ಸೇವೆ ಸಲ್ಲಿಸಿದ ಇಸಾಬ ತಂಡಕ್ಕೆ ಪ್ರಶಂಷೆ ವ್ಯಕ್ತ ವಾಗಿದೆ.