ಆ.7ಕ್ಕೆ ಬೆಂಗಳೂರು – ಮೈಸೂರು ಪ್ರತಿಭಟನಾ ಕಾಲ್ನಡಿಗೆ ಜಾಥಕ್ಕೆ ಸುಳ್ಯದಿಂದ 500 ಕಾರ್ಯಕರ್ತರು ಭಾಗಿ; ವೆಂಕಟ್ ವಳಲಂಬೆ

0

ರಾಜ್ಯ ಸರಕಾರದ ಭ್ರಷ್ಟಾಚಾರದ ವಿರುದ್ಧ ಹಮ್ಮಿಕೊಂಡಿರುವ ಕಾಲ್ನಡಿಗೆ ಜಾಥದಲ್ಲಿ ಆ.7 ರಂದು ಸುಳ್ಯದಿಂದ 500 ಮಂದಿ ಭಾಗವಹಿಸಲಿದ್ದಾರೆಂದು ಸುಳ್ಯ ಮಂಡಲ ಸಮಿತಿಯ ಅಧ್ಯಕ್ಷರಾದ ವೆಂಕಟ್ ವಳಲಂಬೆ ಹೇಳಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ಸಿನ ಸಿದ್ದರಾಮಯ್ಯ ನೇತೃತ್ವದ ಸರಕಾರ ಬಂದು 13 ತಿಂಗಳುಗಳಾದರೂ ಯಾವುದೇ ಅಭಿವೃದ್ಧಿ ಕೆಲಸಗಳನ್ನು ನಡೆಸದೇ ಮತದಾರರಗೆ ನೀಡಿದ ಭರವಸೆಗೆ ಅನ್ಯಾಯ ವೆಸಗಿದ್ದಾರೆ. ಕೃಷಿಕರ ಪಂಪ ಸೆಟ್ ಗೆ ನೀಡುವ ಸಹಾಯ ರದ್ದು ಮಾಡಿ ಡೀಸೆಲ್, ಪೆಟ್ರೋಲ್ ಬೆಲೆ ಜಾಸ್ತಿ ಮಾಡಿ ಜನಸಾಮಾನ್ಯರಿಗೆ ಅಗತ್ಯವಿರುವ ಸಾಮಾಗ್ರಿ ಬೆಲೆ ದುಪ್ಪಟ್ಟು ಮಾಡಿದ್ದಾರೆ. ವಾಲ್ಮೀಕಿ ನಿಗಮದ ಹಣವನ್ನು ನುಂಗಿ ಹಾಕಿದ ಮತ್ತು ಮೈಸೂರು ಮುಡಾದಲ್ಲಿ ನೇರ ಮುಖ್ಯಮಂತ್ರಿಯೇ ನಿವೇಶನಗಳನ್ನು ಮಾಡಿಕೊಂಡು ಸಾವಿರಾರು ಕೋಟಿ ಅವ್ಯವಹಾರ ಮಾಡಿ ರಾಜ್ಯದ ಜನತೆಗೆ ಅನ್ಯಾಯ ವೆಸಗಿರುವ ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು.ಕಾಂಗ್ರೆಸ್ ಸರಕಾರ ಕಿತ್ತೊಗೆದು ಸಂವಿಧಾನಕ್ಕೆ ನ್ಯಾಯ ಒದಗಿಸುವ ತನಕ ಹೋರಾಟ ನಡೆಯಲಿದೆ. ಸುಳ್ಯ ವಿಧಾನಸಭಾ ಕ್ಷೇತ್ರದ ವಿವಿಧ ಸ್ಥರದ ಕಾರ್ಯಕರ್ತರು 6ನೇ ತಾರೀಕು ರಾತ್ರಿ ಹೊರಟು ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ವೆಂಕಟ್ ವಳಲಂಬೆ ವಿನಂತಿಸಿದ್ದಾರೆ.