ಬಾಳೆಮಕ್ಕಿ: ನೆರಳಿಗೆ ನೆಟ್ಟ ಮರಗಳಿಗೆ ಗರಗಸ ಹಾಕಿದ ಕಿಡಿಗೇಡಿಗಳು

0

4 ಮರಗಳನ್ನು ಮುಕ್ಕಾಲು ಕೊಯ್ದು ಬಟ್ಟೆ ಕಟ್ಟಿದ್ದರು – 2 ಮರಗಳು ಧರೆಗೆ

ಸುಳ್ಯದ ಬಾಳೆಮಕ್ಕಿ ಬಳಿ ಕಿಡಿಗೇಡಿಗಳು ಮಾಡಿದ ಕೃತ್ಯಕ್ಕೆ ನೆರಳಿಗಾಗಿ ನೆಟ್ಟಿದ್ದ 4 ಮರಗಳು ಬಲಿಯಾದ ಘಟನೆ ಇದೀಗ ನಡೆದಿದೆ.

ದ್ವಾರಕಾ ಹೋಟೆಲ್ ಬಳಿ ರಾಜಶ್ರೀ ಕಾಂಪ್ಲೆಕ್ಸ್ ಎದುರುಗಡೆ ರಸ್ತೆ ಬದಿಯಲ್ಲಿ ನೆರಳಿಗಾಗಿ ಗಿಡಗಳನ್ನು ನೆಡಲಾಗಿದೆ. ಆ ಗಿಡಗಳು ಈಗ ಬೆಳೆದು ಮರಗಳಾಗುತ್ತಿವೆ. ಇದರಲ್ಲಿ ನಾಲ್ಕು ಮರಗಳನ್ನು ಯಾರೋ ದುಷ್ಕರ್ಮಿಗಳು ಗರಗಸದಲ್ಲಿ ಮುಕ್ಕಾಲು ಭಾಗ ಕೊಯ್ದು, ಆ ಜಾಗಕ್ಕೆ ಬಟ್ಟೆ ಕಟ್ಟಿ ಯಾರಿಗೂ ಗೊತ್ತಾಗದಂತೆ ಮಾಡಲಾಗಿತ್ತು. ಇದೀಗ ಅದರಲ್ಲಿ 2 ಮರಗಳು ಗಾಳಿಗೆ ಬಿದ್ದಿದೆ.

ಒಂದು ಮರ ಪಾರ್ಕಿಗ್ ನಲ್ಲಿ ನಿಲ್ಲಿಸಿದ್ದ ದಿವಾಕರ ಎಂಬುವರ ಜೀಪಿನ ಮೇಲೆ ಬಿದ್ದಿದ್ದು ಮರದ ಗಾತ್ರ ಸಣ್ಣದಿದ್ದ ಅಪಾಯದಿಂದ ಪಾರಾಗಿದ್ದಾರೆ.

ಈ ಮರಗಳನ್ನು ಈ ರೀತಿ ಕೊಯ್ದು ಕಿಡಿಗೇಡಿತನ ಮಾಡಿದವರಾರೆಂದು ಪತ್ತೆಹಚ್ಚಬೇಕಾಗಿದೆ.