ಹಳೆಗೇಟು: ಶ್ರೀ ಸ್ವಾಮಿ ಕೊರಗಜ್ಜ ದೈವಸ್ಥಾನ ಬೆಟ್ಟಂಪಾಡಿ ಸಮಿತಿಯ ಮಹಾಸಭೆ ಮತ್ತು ಅಭಿನಂದನಾ ಕಾರ್ಯಕ್ರಮ

0

ಶ್ರೀ ಸ್ವಾಮಿ ಕೊರಗಜ್ಜ ದೈವಸ್ಥಾನ ಸಮಿತಿ ಬೆಟ್ಟಂಪಾಡಿ (ರಿ ) ಹಳೆಗೇಟು ಸುಳ್ಯ ಇದರ ಮಹಾಸಭೆ ಮತ್ತು ಅಭಿನಂದನಾ ಕಾರ್ಯಕ್ರಮ ಆ. 4ರಂದು ನಡೆಯಿತು.

ಸಭೆಯ ಕಾರ್ಯಕ್ರಮದಲ್ಲಿ ಸ್ವಾಮಿ ಕೊರಗಜ್ಜ ದೈವಸ್ಥಾನದ ಅಧ್ಯಕ್ಷ ಚಿದಾನಂದ ವಿದ್ಯಾನಗರ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ನೇಮೋತ್ಸವದಸಮಿತಿಅಧ್ಯಕ್ಷಲತಾಮಧುಸೂದನ್ಅಭಿನಂದನಾಮಾತುಗಳನ್ನಾಡಿದರು. ಬಳಿಕ ಕಳೆದ ಮೂರು ವರ್ಷಗಳಿಂದ ಉತ್ತಮವಾದ ಬೆಳಕು ಮತ್ತು ಧ್ವನಿ ವ್ಯವಸ್ಥೆ ಜ್ಯೋತಿ ಲೈಟ್ಸ್ & ಸೌಂಡ್ಸ್ ಸುಳ್ಯ ಮಾಲಕ ಶಿವ ಪ್ರಸಾದ್ ರವರ ಪತ್ನಿ ವನಿತಾ ಶಿವ ಪ್ರಸಾದ್ ಮತ್ತು ಮಕ್ಕಳಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.ಖಜಾಂಜಿ ಚಂದ್ರರಾವ್ ಲೆಕ್ಕಪತ್ರ ಮಂಡನೆಯನ್ನು ಮಾಡಿದರು.


ವೇದಿಕೆಯಲ್ಲಿ ಪೂರ್ವಾಧ್ಯಕ್ಷ ಅನೂಪ್ ಕಮಲಾಕ್ಷ, , ಉಪಾಧ್ಯಕ್ಷ ಸುನಿಲ್ ಕುಮಾರ್ ಕೆ.ಎಲ್, ಪದಾಧಿಕಾರಿಗಳಾದ ರವೀಶ ಪಡ್ಡಂಬೈಲು, ಆನಂದ ಬೆಟ್ಟಂಪಾಡಿ ಮತ್ತು ಸದಸ್ಯರು, ಗ್ರಾಮಸ್ಥರು ಉಪಸ್ಥಿರಿದ್ದರು.
ಆನಂದ ಬೆಟ್ಟಂಪಾಡಿ ಸ್ವಾಗತಿಸಿ,ರವೀಶ ಪಡ್ಡಂಬೈಲು ಧನ್ಯವಾದಿಸಿ ,ಗಿರೀಶ್ ಕುಂಟಿಕಾನ ಕಾರ್ಯಕ್ರಮವನ್ನು ನಿರೂಪಿಸಿದರು.