ಬೆಳ್ಳಾರೆ : ಹೊಂಡಗುಂಡಿಗಳಿಂದ ಕೂಡಿದ ಅಜಪಿಲ ದೇವಸ್ಥಾನ ರಸ್ತೆ

0

ಅಜಿಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆ ಹೊಂಡಗುಂಡಿಗಳಿಂದ ಕೂಡಿದ್ದು
ಸಂಚಾರಕ್ಕೆ ತೊಂದರೆಯಾಗಿದೆ.


ಕಳೆದ ಬಾರಿ ಮೆಸ್ಕಾಂ ಗುತ್ತಿಗೆದಾರರು ಗುತ್ತಿಗಾರು ಕಡೆಗೆ ಅಂಡರ್ ಗ್ರೌಂಡ್ ವಿದ್ಯುತ್ ಕೇಬಲ್ ಹಾಕಲು ಹೊಂಡತೆಗೆದಿದ್ದು ಹೊಂಡವನ್ನು ಸರಿಯಾಗಿ ಮುಚ್ಚದೆ ಈಗ ಮಳೆಗಾಲದಲ್ಲಿ ತೊಂದರೆಯಾಗಿದೆ‌.
ದೇವಸ್ಥಾನಕ್ಕೆ ಹೋಗುವ ಭಕ್ತಾದಿಗಳಿಗೆ,ಸಾರ್ವಜನಿಕರಿಗೆ ತೊಂದರೆಯಾಗಿದ್ದು ಕೂಡಲೇ ಈ ಬಗ್ಗೆ ಜನಪ್ರತಿನಿಧಿಗಳು,ಅಧಿಕಾರಿಗಳು ಗಮನಹರಿಸಿ ರಸ್ತೆ ದುರಸ್ಥಿಗೊಳಿಸಬೇಕೆಂದು ಸಾರ್ವಜನಿಕರು ವಿನಂತಿಸಿದ್ದಾರೆ.