ದೇವಚಳ್ಳ : ಮಾಸಾಸನ ವಿತರಣಾ ಕೈಪಿಡಿ ವಿತರಣೆ

0

ದೇವಚಳ್ಳ ಗ್ರಾಮದ ಬಿದಿರು ಕಾಡುಮನೆ ಎಂಬಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿರುವ ಲೀಲಾವತಿ ಎಂಬವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ.1,000 ಮಾಸಾಸನ ಮಂಜೂರಾಗಿದ್ದು, ಮಾಸಾಸನ ವಿತರಣಾ ಕೈಪಿಡಿಯನ್ನು ಫಲಾನುಭವಿಯ ಮನೆ ಭೇಟಿ ಮಾಡಿ ನೀಡಲಾಯಿತು.

ಈ ಸಂದರ್ಭದಲ್ಲಿ ಸಂಪಾಜೆ ವಲಯ ಮೇಲ್ವಿಚಾರಕ ಗಂಗಾಧರ, ಸುಳ್ಯ ತಾಲೂಕಿನ ಜ್ಞಾನವಿಕಾಸ ಸಮನ್ವಯಾಧಿಕಾರಿ ಲಕ್ಷ್ಮಿ , ಮರ್ಕಂಜ ಒಕ್ಕೂಟದ ಅಧ್ಯಕ್ಷ ಗೋಪಾಲಕೃಷ್ಣ ಬಲ್ಕಾಡಿ ಹಾಗೂ ಸೇವಾ ಪ್ರತಿನಿಧಿ ರೋಹಿಣಿ ಉಪಸ್ಥಿತರಿದ್ದರು.

ಈ ಹಿಂದೆ ಲೀಲಾವತಿಯವರ ಆಸರೆ ಮನೆ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ.10,000 ಸಹಾಯಧನ ನೀಡಲಾಗಿತ್ತು ಹಾಗೂ ಸಂಪಾಜೆ ವಲಯದ ಶೌರ್ಯ ವಿಪತ್ತು ಘಟಕದವರು ಮನೆ ನಿರ್ಮಾಣದ ಶ್ರಮ ಸೇವೆಯಲ್ಲಿ ಸಹಕರಿಸಿದ್ದರು.