ಪಂಜ ಪರಿಸರದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಸೆ.7 ರಿಂದ ಸೆ.9 ತನಕ ಗಣೇಶೋತ್ಸವ

ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಆ.8 ರಂದು ಪಂಜ ಲಯನ್ಸ್ ಭವನದಲ್ಲಿ ಜರುಗಿತು.

ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸಂತೋಷ್ ಜಾಕೆ ಸಭಾಧ್ಯಕ್ಷತೆ ವಹಿಸಿದ್ದರು.

ಸಾರ್ವಜನಿಕ ಆರಾಧನಾ ಸಮಿತಿಯ ಗೌರವಾಧ್ಯಕ್ಷ ಮಾಧವ ಗೌಡ ಜಾಕೆ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಈ ವೇಳೆ ಗಣೇಶೋತ್ಸವ ಸಮಿತಿ ಪೂರ್ವ ಅಧ್ಯಕ್ಷ ಶ್ರೇಯಾಂಸ್ ಕುಮಾರ್ ಶೆಟ್ಟಿಮೂಲೆ ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಸಾರ್ವಜನಿಕ ಆರಾಧನಾ ಸಮಿತಿ ಅಧ್ಯಕ್ಷ ಸವಿತಾರಾ ಮುಡೂರು, ಕಾರ್ಯದರ್ಶಿ ಜಯರಾಮ ಕಲ್ಲಾಜೆ, ಗಣೇಶೋತ್ಸವ ಸಮಿತಿ ಸಮಿತಿ ಕಾರ್ಯದರ್ಶಿ ಕೇಶವ ಕುದ್ವ, ಕೋಶಾಧ್ಯಕ್ಷ ವಾಸುದೇವ ಮೇಲ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಜೀವನ್ ಮಲ್ಕಜೆ ವೇದಿಕೆಗೆ ಅಹ್ವಾನಿಸಿದರು. ಸಂತೋಷ್ ಜಾಕೆ ಸ್ವಾಗತಿಸಿದರು.ವಾಸುದೇವ ಮೇಲ್ಪಾಡಿ ಉತ್ಸವದ ಅಂದಾಜು ಬಜೆಟ್ ಮಂಡಿಸಿದರು. ಕೇಶವ ಕುದ್ವ ವಂದಿಸಿದರು.

ಸೆ.7 ರಿಂದ ಸೆ.9 ತನಕ ವೈಧಿಕ, ಧಾರ್ಮಿಕ ಮತ್ತು ವಿವಿಧ ಕಾರ್ಯಕ್ರಮಗಳೊಂದಿಗೆ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ವಿಜೃಂಭಣೆಯಿಂದ ಜರುಗಲಿದೆ.