ದಿl ಜತ್ತಪ್ಪ ಗೌಡ ಕೋಡಿ ಅವರಿಗೆ ಸಾರ್ವಜನಿಕ ನುಡಿನಮನ ಕಾರ್ಯಕ್ರಮ

0

ಶ್ರೀ ಉಳ್ಳಾಕುಲು ಉಳ್ಳಾಲ್ತಿ ಮಹಿಷಂತಾಯ ಹಾಗೂ ಪರಿವಾರ ದೈವಗಳ ದೈವಸ್ಥಾನದ ಪ್ರಧಾನ ಪರಿಚಾರಕ ಜತ್ತಪ್ಪ ಗೌಡ ಕೋಡಿ ಅವರು ಇತ್ತೀಚೆಗೆ ನಿಧನರಾಗಿದ್ದ ಅವರಿಗೆ ಸಾರ್ವಜನಿಕ ನುಡಿನಮನ‌ ಕಾರ್ಯಕ್ರಮ ಆ.9 ರಂದು ನಡೆಸಲಾಯಿತು.

ಜೈ ಕರ್ನಾಟಕ ಯುವಕ ಮಂಡಲ ಮತ್ತು ಕೃಪಾ ಯುವತಿ ಮಂಡಲ , ಅಲ್ಪೆ ಚಿಂಗಾಣಿ ಇದರ ಸಭಾಭವನದಲ್ಲಿ ಕಾರ್ಯಕ್ರಮ ಅಯೋಜಿಸಲಾಗಿತ್ತು.

ದೇವದಾಸ ರೈ ಕೆಬ್ಲಾಡಿ , ರಾಮಕೃಷ್ಣ ಸಾಯಿಕೃಪಾ,
ಪುರುಷೋತ್ತಮ ಮುಡೂರು,
ಶ್ರೀಮತಿ ಗಿರಿಜಾ ಕೆದಿಲ,
ಶ್ರೀಮತಿ ಪುಷ್ಪಾ ಡಿ ಪ್ರಸಾದ್ ಕಾನತ್ತೂರು, ಭರತ್ ರಾಮತೋಟ, ವಿದ್ಯಾನಂದ ಮೇಲ್ಮನೆ, ಕುಸುಮಾಧರ ಕರಿಮಜಲು,
ಚಂದ್ರಶೇಖರ ಕೋಡಿ ಮತ್ತಿತರರು ಮೃತರ ಬಗ್ಗೆ ನುಡಿನಮನ ಅರ್ಪಿಸಿದರು.
ಗುರುಪ್ರಸಾದ್ ತೋಟ ಕಾರ್ಯಕ್ರಮ ನಿರೂಪಿಸಿದರು.