ಆ.16- 17 ರಂದು ಮುಂಬಯಿಯಲ್ಲಿ ನೆಟ್ಕಾನ್ ರಾಷ್ಟ್ರೀಯ ಕಾನ್ಪರೆನ್ಸ್

0


ಭಾಗಿಯಾಗಲಿರುವ ಪುತ್ತೂರಿನ ಇಂಜಿನಿಯರ್‌ಗಳು


ಎರಡು ಪ್ರಶಸ್ತಿ ಪಡೆಯಲಿರುವ ಪುತ್ತೂರು ವಿಭಾಗ

ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಇಂಡಿಯಾ ಮುಂಬಯಿಯಲ್ಲಿ ಆಯೋಜಿಸುವ ರಾಷ್ಟ್ರೀಯ ನೇಟ್ಕಾನ್ ರಾಷ್ಟ್ರೀಯ ಸಮ್ಮೇಳನದಲ್ಲಿ ಪುತ್ತೂರು, ಸುಳ್ಯ, ಕಡಬ, ಬಂಟ್ವಾಳ ವ್ಯಾಪ್ತಿಯನ್ನೊಳಗೊಂಡ ಪುತ್ತೂರು ಸೆಂಟರ್ನಿಂದ ೧೫ ಜನ ಭಾಗವಹಿಸಲಿದ್ದಾರೆ.


ಇಂಜಿನಿಯರ್ ಗಳಾದ ಪ್ರಮೋದ್, ವಿನೋದ್, ಚೇತನ್, ಶಿವರಾಮ, ಎಚ್ ಅಜಿತ್, ಬಾಲಕೃಷ್ಣ, ಎಲ್.ಸಿ ಸೀಕ್ವೆರಾ, ಹರಿಶ್, ಆದರ್ಶ, ರಾಜಶೇಖರ, ಕನಿಷ್ಕಾ, ಪ್ರಸನ್ನದರ್ಬೆ, ಲೊಕೇಶ್, ದೇವಿಪ್ರಸಾದ್, ಚಂದ್ರಶೇಖರ ಭಾಗವಹಿಸಲಿದ್ದಾರೆ.


ಅಲ್ಲದೆ ಇದೇ ಸಮಾವೇಶದಲ್ಲಿ ಪುತ್ತೂರು ವಿಭಾಗವು ಉತ್ತಮ ಸಂಘಟಕ ಹಾಗೂ ಉತ್ತಮ ಬೆಳವಣಿಗೆ ಸಂಘಟನೆ ಪ್ರಶಸ್ತಿ ಪಡೆಯಲಿದೆ ಎಂದು ತಿಳಿದು ಬಂದಿದೆ.