ಗುತ್ತಿಗಾರು : ಸೈಂಟ್ ಮೇರಿಸ್ ಚರ್ಚಿನಲ್ಲಿ ಧ್ವಜಾರೋಹಣ

0

ಸ್ವಾತಂತ್ರ್ಯ ದಿನದ ಪ್ರಯುಕ್ತ ಸೈಂಟ್ ಮೇರಿಸ್ ಚರ್ಚಿನಲ್ಲಿ ಇಂದು ಧ್ವಜಾರೋಹಣ ನೆರವೇರಿಸಲಾಯಿತು.

ವಿಶೇಷ ಪೂಜಾರ್ಪಣೆ ನಡಸಿ ಬಳಿಕ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಸಾಮಾಜಿಕ ವಿಭಾಗದ ನಿರ್ದೇಶಕರು ವಂದನಿಯ ಬಿನೋಯಿ ಮಾಳಿಗಯಿಲ್ ಧ್ವಜಾರೋಹಣ ನೆರವೇರಿಸಿದರು.

ಬಳಿಕ ಮಾತನಾಡಿ ಸ್ವತಂತ್ರ್ಯಕ್ಕಾಗಿ ಅಹಿಂಸಾ ಮಾರ್ಗದಿಂದ ಹೋರಾಟ ಮಾಡಿದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ ದೇಶಕ್ಕಾಗಿ ಜೀವ ತ್ಯಾಗ ಮಾಡಿದ ಸ್ವತಂತ್ರ ಹೋರಾಟಗಾರರಿಗೆ ಗೌರವ ಸಲ್ಲಿಸಿ, ಯಾವುದೇ ಬೇದ ಭಾವವಿಲ್ಲದೆ ದೇಶವನ್ನು ಕಟ್ಟುವಲ್ಲಿ ಕೈಜೋಡಿಸಬೇಕು ಎಂದರು.

ಈ ಸಂದರ್ಭ ಗುತ್ತಿಗಾರು ಚರ್ಚ್ ನ ಫಾದರ್ ಆದರ್ಶ್ ಜೋಸೆಫ್, ಚರ್ಚ್ ನ ಸದಸ್ಯರು ಉಪಸ್ಥಿತರಿದ್ದರು.