ಪಂಜ ಪ್ರಾ.ಕೃ. ಸಹಕಾರ ಸಂಘದಲ್ಲಿ ಪ್ರತಿ ದಿನ ಮುಂಜಾನೆ ಮೊಳಗಲಿದೆ ರಾಷ್ಟ್ರ ಗೀತೆ

0

⬆️ಪಂಜ ಮತ್ತು ಬಳ್ಪ ಶಾಖೆಯಲ್ಲಿ ಪ್ರತಿ ದಿನ ರಾಷ್ಟ್ರ ಗೀತೆ

⬆️ ಸ್ವಾತಂತ್ರ್ಯೋತ್ಸವದಲ್ಲಿ ಚಾಲನೆ

⬆️ ಸಹಕಾರ ಸಂಘದಲ್ಲೊಂದು ರಾಷ್ಟ್ರ ಪ್ರೇಮದ ವಿಶೇಷ ಕಾರ್ಯಕ್ರಮ

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಆ.15 ರಂದು ರಾಷ್ಟ್ರ ಪ್ರೇಮದ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮತ್ತು ಇದರ ಬಳ್ಪ ಶಾಖೆಯಲ್ಲಿ ಇನ್ನು ಮುಂದೆ ಪ್ರತಿ ದಿನ ಮುಂಜಾನೆ 9.30 ಗಂಟೆಗೆ ರಾಷ್ಟ್ರ ಗೀತೆ ಧ್ವನಿ ವರ್ಧಕದಲ್ಲಿ ಮೊಳಗಲಿದೆ.

ಕಾರ್ಯಕ್ರಮಕ್ಕೆ ಸಂಘದ ಅಧ್ಯಕ್ಷ ಗಣೇಶ್ ಪೈ ರವರು ಚಾಲನೆ ನೀಡಿ ಮಾತನಾಡಿ ” ರಾಷ್ಟ್ರ ಗೀತೆ ಮೊಳಗುವ ವೇಳೆ ಎಲ್ಲರೂ ಅದಕ್ಕೆ ಗೌರವ ನೀಡ ಬೇಕು”. ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಕೆ ರಘುನಾಥ ರೈ, ನಿರ್ದೇಶಕರಾದ ಚಂದ್ರಶೇಖರ ಶಾಸ್ತ್ರಿ, ಸುಬ್ರಹ್ಮಣ್ಯ ಕುಳ, ಲಿಗೋಧರ ಆಚಾರ್ಯ, ಶ್ರೀ ಕೃಷ್ಣ ಭಟ್ ಪಟೋಳಿ, ವಾಚಣ್ಣ ಕೆರೆಮೂಲೆ, ಚಿನ್ನಪ್ಪಗೌಡ ಚೊಟ್ಟೆಮಜಲು, ಕಿಟ್ಟಣ್ಣ ಪೂಜಾರಿ, ಮುದರ ಐವತೊಕ್ಲು, ಶ್ರೀಮತಿ ಮೋಹಿನಿ ಬೊಳ್ಮಲೆ, ಶ್ರೀಮತಿ ಹೇಮಲತಾ ಚಿದ್ಗಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ಮತ್ತು ಸಿಬ್ಬಂದಿಗಳು, ಊರವರು ಉಪಸ್ಥಿತರಿದ್ದರು.