ಕರ್ನಾಟಕ ಮುಸ್ಲಿಂ ಜಮಾಅತ್ ಎಸ್ ವೈ ಎಸ್ ಹಾಗೂ ಎಸ್ ಎಸ್ ಎಫ್ ವತಿಯಿಂದ ಸ್ವಾತಂತ್ರೋತ್ಸವ ದಿನಾಚರಣೆ

0

ವಿದ್ಯುತ್‌ ಪವರ್‌ ಮ್ಯಾನ್‌ಗಳಿಗೆ ಗೌರವ ಸಮರ್ಪಣೆ

ಸ್ವಾತಂತ್ರ್ಯದ ದಿನಾಚರಣೆ ಅಂಗವಾಗಿ ಗಾಂಧಿನಗರ ಸುನ್ನೀ ಸೆಂಟರ್ ವಠಾರದಲ್ಲಿ SჄS ಯುನಿಟ್ ಅದ್ಯಕ್ಷ ಅಬ್ದುಲ್ ರಶೀದ್ ಝೈನಿ ಪೆರಾಜೆ ದುವಾ ಮೂಲಕ ಚಾಲನೆ ನೀಡಿದರು.

ಧ್ವಜಾರೋಹಣವನ್ನು ಅಬ್ದುರ್ರಹ್ಮಾನ್ ಹಾಜಿ ಕಯ್ಯಾರ್ ನೆರವೇರಿಸಿದರು.

ಸಂದೇಶ ಭಾಷಣವನ್ನು ಅಡ್ವೊಕೇಟ್ ಅಬ್ದುಲ್ಲಾ ಹಿಮಮಿ ಅನ್ಸಾರಿಯಾ ಇವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದ ಮುಸಲ್ಮಾನರನ್ನು, ಸೈನಿಕರನ್ನು ಅನುಸ್ಮರಿಸಿದರು.

ಮಳೆ ಬಿರುಗಾಳಿಗಳೆಷ್ಟೇ ಬೀಸಿದರೂ ಪ್ರತಿ ಮನೆಗಳನ್ನು ಬೆಳಗಿಸುತ್ತಿರುವ ಮೆಸ್ಕಾಂ ಸುಳ್ಯ ನಗರದ ಉದ್ಯೋಗಿ ಗಳಾದ ಮಹಮ್ಮದ್, ತನ್ವೀರ್(ಪವರ್ ಮ್ಯಾನ್), ಸದಾಶಿವ
ಸಹಾಯಕ ಲೈನ್ ಮ್ಯಾನ್, ಭವಾನಿ ಶಂಕರ್ ಎನ್.ಎಮ್
ಅಸಿಸ್ಟೆಂಟ್ ಲೈನ್ ಇವರುಗಳನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಜಮಾಅತ್ ಅದ್ಯಕ್ಷ ಮುಹಮ್ಮದ್ ಕೆ.ಎಮ್.ಎಸ್,ಅನ್ಸಾರ್ ಅದ್ಯಕ್ಷರಾದ ಅಬ್ದುಲ್ಲಾ ಹಾಜಿ ಕಟ್ಟೆಕ್ಕಾರ್,ಮುಸ್ಲಿಂ ಜಮಾಅತ್ ಝೋನ್ ಅಧ್ಯಕ್ಷರಾದ ಹಮೀದ್ ಬೀಜ ಕೊಚ್ಚಿ,ಅಬ್ದುಲ್ ಹಮೀದ್ ಎಸ್.ಎಮ್,ಮಜೀದ್ ಕೆ.ಬಿ,ನ.ಪಂ.ಸದಸ್ಯರಾದ ಶರೀಪ್ ಕಂಠಿ,ಎಸ್ ವೈ ಎಸ್ ರಾಜ್ಯ ಸದಸ್ಯರಾದ ಸಿದ್ದೀಕ್ ಕಟ್ಟೆಕ್ಕಾರ್,ಅಬೂಬಕ್ಕರ್ ಜಟ್ಟಿಪ್ಪಳ್ಳ,ಎಸ್.ಪಿ ಅಬೂಬಕ್ಕರ್, ಫೈಝಲ್ ಝುಹಿರಿ ಕಲ್ಲುಗುಂಡಿ, ಮುಹಮ್ಮದ್ ಹೈಫಾ, ಮುಹಮ್ಮದ್ ಸಿ.ಎ,ಅಬ್ದುಲ್ಲಾ ಸಖಾಫಿ ಪಾರೆ, ಇಸ್ಮಾಯಿಲ್ ಅಹ್ಸನಿ, ಮುಹಮ್ಮದ್ ಪೈಂಟರ್, ಇಸ್ಮಾಯಿಲ್ ಪ್ರಿಯಾ,ನಿಝಾರ್ ಸಖಾಫಿ ಮುಡೊರು,ಅಬ್ದುಲ್ ರಹಿಮಾನ್ ಸಅದಿ,ಖಾದರ್ ಸಂಗಂ, ಮೊಯ್ದೀನ್ ಜಟ್ಟಿಪ್ಪಳ್ಳ,ಹಾರಿಸ್ ಎಸ್.ಎಚ್,ಅಬ್ಬಾಸ್ ಜಟ್ಟಿಪ್ಪಳ್ಳ, ಫೈಝಲ್ ಕಟ್ಟೆಕ್ಕಾರ್,ಶಮೀರ್,ಸಮದ್ ಕಲ್ಲಪಳ್ಳಿ,ರಹೀಮ್ ಕಲ್ಲಪಳ್ಳಿ,ಉಬೈಸ್,ಧನು ಹಾರ್ಡ್ ವೇರ್ ಮಾಲೀಕರಾದ ಧನಂಜಯ, ಹನೀಫ್ ಕುರುಂಜಿ, ಸಿದ್ದೀಕ್ ಎಣ್ಮೊರ್,ರಿಯಾಝ್ ಪೆರಾಜೆ, ಅಝೀಝ್ ಪೊಟ್ ವೇರ್, ಖಾದರ್ ಹನಗೇರಿ,ಹಾರಿಸ್ ಬೋರು ಗುಡ್ಡೆ,ಮುಖ್ತಾರ್ ಅರಂಬೂರು,ಹಂಝತುಲ್ ಖರ್ರಾರ್,ಪಾರಿಸ್ ನಾವೂರು, ಗಾಂಧಿನಗರ ಎಸ್ ಎಸ್ ಎಫ್ ಅದ್ಯಕ್ಷರಾದ ಮುಸ್ತಫಾ,ಸ್ವಾದಿಕ್ ಪಿಜಿ,ಬಶೀರ್ ಕಲ್ಲುಮುಟ್ಳು,ಅಬೂಬಕ್ಕರ್ ವೈಟ್
ಮೊದಲಾದವರು ಉಪಸ್ಥಿತರಿದ್ದರು.

ಸಿದ್ದೀಕ್ ಬಿ.ಎ ಸ್ವಾಗತಿಸಿ,ಆಬಿದ್ ಕಲ್ಲುಮುಟ್ಳು ವಂದಿಸಿದರು,ನೌಶಾದ್ ಕೆರೆಮೂಲೆ ಕಾರ್ಯಕ್ರಮ ನಿರೂಪಿಸಿದರು, ಕೊನೆಯಲ್ಲಿ ಸಿಹಿ ತಿಂಡಿ ವಿತರಿಸಲಾಯಿತು.