ಅಮರ ಸುಳ್ಯ ಪಿಕಪ್ ಟೆಂಪೊ ಚಾಲಕ ಮಾಲಕರ ಸಂಘದ ಮಹಾಸಭೆ

0

ಸುಳ್ಯ ಗಾಂಧಿನಗರದ ಅಮರಸುಳ್ಯ ಪಿಕಪ್ ಟೆಂಪೊ ಚಾಲಕ ಮಾಲಕರ ಸಂಘದ ವಾರ್ಷಿಕ ಮಹಾಸಭೆಯು ಆ.15 ರಂದು ಗಾಂಧಿನಗರ ಪಾರ್ಕಿಂಗ್ ನಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ರಾಜೇಶ್ ಕೆದ್ಕಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ದಿನೇಶ್ ಮಡಪ್ಪಾಡಿ ಭಾಗವಹಿಸಿ ಸಲಹೆ ಸೂಚನೆ ನೀಡಿದರು.


ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಪಿ‌.ಜಿ ಜಯರಾಮ, ಕಾರ್ಯದರ್ಶಿ ಮನೋಹರ ಉಳುವಾರು, ಜತೆ ಕಾರ್ಯದರ್ಶಿ ಕುಸುಮಾಧರ ನಾರ್ಕೋಡು, ಕೋಶಾಧಿಕಾರಿ ಪುರುಷೋತ್ತಮ ಮುಳ್ಯ ಹಾಗೂ ಸಂಘದ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು.