ಸುಬ್ರಹ್ಮಣ್ಯ ದೇವರಗದ್ದೆ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಸುಬ್ರಹ್ಮಣ್ಯ ದೇವರಗದ್ದೆ ಅಂಗನವಾಡಿಯಲ್ಲಿ ಪುಟಾಣಿ ಮಕ್ಕಳಿಂದ ಧ್ವಜಾರೋಹಣ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ಮಾಸ್ಟರ್ ಪ್ಲಾನ್ ಸದಸ್ಯ ಶಿವರಾಮ ರೈ, ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಮಾಧವ ಡಿ, ದೇವಳದ ನೌಕರ ತಂಬಾ ನಾಯರ್, ಸುಜಾತಾ ಭಟ್ , ದಿವ್ಯ ಭಟ್, ವನಿತಾ ಲಕ್ಷ್ಮೀಶ, ಮಮತಾ ಬಾಲಕೃಷ್ಣ, ಹಾಗೂ ಸೈನಿತಾ ದೇವರಗದ್ದೆ ಶುಭ ಹಾರೈಸಿದರು. ಊರಿನವರಾದ ನಾರಾಯಣ ಮಾನಾಡು, ತಾರಾನಾಥ್ ಕೋನಡ್ಕ, ಆನಂದ ದೇವರಗದ್ಧೆ, ಮಾಧವ ನವಗ್ರಾಮ, ಗಣೇಶ್ ಭಟ್, ಪರಮೇಶ್ವರ ಭಟ್, ಗೋಪಾಲ ಗೌಡ, ಯುವರಾಜ್ ಯಂ.ಕೆ. , ಆಶಾ ಶೇಷಕುಮಾರ್, ಮಂಜುಳ ನಾರಾಯಣ, ನಾಗವೇಣಿ ಭಟ್, ಸಂದ್ಯಾಜಯಪ್ರಕಾಶ್, ಪೂಜಾ ದೇವರಗದ್ಧೆ, ಗೀತಾ ಕಲ್ಲಜಡ್ಕ, ದರ್ಮವತಿಗಣೇಶ್ ಉಪಸ್ಥತರಿದ್ದರು. ಅಂಗನವಾಡಿ ಕಾರ್ಯಕರ್ತೆ ಕಮಲ ಸ್ವಾಗತಿಸಿದರು.