ಅಜ್ಜಾವರದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ

0

ಅಜ್ಜಾವರ ಶ್ರೀ ಶಾರದಾರಾಮ ಸೇವಾ ಪ್ರತಿಷ್ಠಾನ ಬಯಂಬು ಇದರ ಆಶ್ರಯದಲ್ಲಿ ೧೪ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ಆ.೧೬ರಂದು ಶ್ರೀ ಶಂಕರಭಾರತೀ ವೇದಪಾಠ ಶಾಲೆ ಬಯಂಬು ಇದರ ವಠಾರದಲ್ಲಿ ವೇದಮೂರ್ತಿ ಸದಾನಂದ ಶಾಸ್ತ್ರಿಯವರ ನೇತೃತ್ವದಲ್ಲಿ ನಡೆಯಿತು.


ಬೆಳಗ್ಗೆ ವರಮಹಾಲಕ್ಷ್ಮೀ ಪೂಜಾರಂಭ ನಡೆಯಿತು. ಬಳಿಕ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಸ್ಥಾಪಕಾಧ್ಯಕ್ಷೆ ಶ್ರೀಮತಿ ಜಯಂತಿ ಜನಾರ್ಧನ ಬೌದ್ಧಿಕ್ ನೀಡಿದರು. ಮಧ್ಯಾಹ್ನ ಮಹಾಪೂಜೆಯ ಬಳಿಕ, ಪ್ರಸಾದ ವಿತರಣೆ ನಡೆದು, ಅನ್ನಸಂತರ್ಪಣೆ ಜರುಗಿತು.
ಈ ಸಂದರ್ಭದಲ್ಲಿ ಬಯಂಬು ಶ್ರೀ ಶಾರದಾರಾಮ ಸೇವಾ ಪ್ರತಿಷ್ಠಾನದ ಧರ್ಮದರ್ಶಿ ಎ.ಭಾಸ್ಕರರಾವ್ ಬಯಂಬು, , ವರಮಹಾಲಕ್ಷ್ಮೀ ಪೂಜಾ ಸಮಿತಿಯ ಗೌರವಾಧ್ಯಕ್ಷ ಕರುಣಾಕರ ಅಡ್ಪಂಗಾಯ, ಅಧ್ಯಕ್ಷೆ ಹರಿಣಾಕ್ಷಿ ಎಸ್ ರೈ ಬೇಲ್ಯ, ಕಾರ್ಯದರ್ಶಿ ವಿಶಾಲ ಸೀತಾರಾಮ ಕರ್ಲಪ್ಪಾಡಿ, ಜತೆ ಕಾರ್ಯದರ್ಶಿ ಪ್ರಿಯಾ ದಾಮೋದರ ಶಿರಾಜೆ, ಉಪಾಧ್ಯಕ್ಷೆ ಚಂದ್ರವತಿ ವೆಂಕಟಕೃಷ್ಣಯ್ಯ, ಖಜಾಂಚಿ ರಮ್ಯಾ ಭವಾನಿಶಂಕರ ಶಿರಾಜೆ, ಸಂಚಾಲಕರಾದ ಸೀತಾಲಕ್ಷ್ಮೀ ಸುಂದರ ಗೌಡ ಕರ್ಲಪ್ಪಾಡಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.