ನಾಗಪಟ್ಟಣ ಸದಾಶಿವ ದೇವಳದಲ್ಲಿ ದೈವ ದೇವರಿಗೆ ತಂಬಿಲ ಸೇವೆ ಹಾಗೂ ಬಲಿವಾಡು ಕೂಟ

0

ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದಲ್ಲಿ ಕ್ಷೇತ್ರದ ತಂತ್ರಿಯವರಾದ ವೇದಮೂರ್ತಿ ಬ್ರಹ್ಮಶ್ರೀ ಆರೋತ್ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ಶ್ರೀ ಗಣಪತಿ ಹವನ, ಶತರುದ್ರಾಭಿಷೇಕ, ಮೃತ್ಯುಂಜಯ ಹೋಮ, ಆಶ್ಲೇಷ ಬಲಿ ಹಾಗೂ ದೈವ ದೇವರ ತಂಬಿಲ ಸೇವೆಯು ಆ.17 ರಂದು ಜರುಗಿತು.

ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.


ಶ್ರಾವಣ ತಿಂಗಳ ಮೊದಲ ಶನಿವಾರದಂದು ವಿಶೇಷ ಪೂಜೆಯಾಗಿ
ಬಲಿವಾಡು ಕೂಟವು ನಡೆಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿನೇಶ್ ಕೋಲ್ಚಾರು, ಸಮಿತಿ ಸದಸ್ಯರು ಮತ್ತು ಅರ್ಚಕ ವೃಂದದವರು ಹಾಗೂ ಸ್ಥಳೀಯ ಭಕ್ತಾದಿಗಳು ಭಾಗವಹಿಸಿದರು.