ಸುಳ್ಯ ಸೈಂಟ್ ಬ್ರಿಜಿಡ್ಸ್ ಶಾಲೆಯ ವಿದ್ಯಾರ್ಥಿ ಹಾರ್ದಿಕ್ ಅಸೌಖ್ಯದಿಂದ ನಿಧನ

0

ಶಾಲೆಯಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನ

ಕಣ್ಣೀರಿನ ವಿದಾಯ ಹೇಳಿದ ಸಹಪಾಠಿಗಳು

ಸುಳ್ಯ ಬೀರಮಂಗಲದಲ್ಲಿ ವಾಸವಾಗಿರುವ ವಿಜಯಕುಮಾರ್ ಎಂಬವರ ಪುತ್ರ ಸೈಂಟ್ ಬ್ರಿಜಿಡ್ಸ್ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಹಾರ್ದಿಕ್ ಇಂದು ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾಗಿದ್ದು ಅವರ ಪಾರ್ಥೀವ ಶರೀರ ಶಾಲೆಗೆ ತಂದಾಗ ಸಹಪಾಠಿಗಳು ಕಣ್ಣೀರ ವಿದಾಯ ಕೋರಿದರು.

ಹಾರ್ದಿಕ್ ಗೆ ಸಣ್ಣ ವಯಸ್ಸಿನಿಂದಲೇ ಕಿಡ್ನಿ ಸಮಸ್ಯೆ ಇತ್ತು. ಕೆಲವು ವರ್ಷಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಚಿಕಿತ್ಸೆ ಪಡೆಯಲಾಗುತ್ತಿತ್ತು.
ಶಿಕ್ಷಕರ ದಿನಾಚರಣೆಯಂದು ಶಾಲೆಯ ಮಕ್ಕಳು ಶಿಕ್ಷಕರಿಗೆ ಯಾವುದೇ ಉಡುಗೊರೆ ಕೊಡುವ ಬದಲು ಈ ವಿದ್ಯಾರ್ಥಿಗೆ ಚಿಕಿತ್ಸೆಗೆ ನೆರವು ನೀಡಿ ಎಂಬ ಮನವಿಯ ಮೇರೆಗೆ ಪೋಷಕರು ನೆರವು ನೀಡುತ್ತಿದ್ದರು.

ಇಂದು ಮುಂಜಾನೆ ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಹಾರ್ದಿಕ್ ನ ಮೃತದೇಹವನ್ನು ಮಧ್ಯಾಹ್ನ ಶಾಲೆಗೆ ತಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿ ಕೊಡಲಾಯಿತು. ಸಹಪಾಠಿಗಳು, ಶಿಕ್ಷಕರು, ಸಂಚಾಲಕರು ಕಣ್ಣೀರ ವಿದಾಯ ಕೋರಿದರು.

ಮೃತ ವಿದ್ಯಾರ್ಥಿ ತಂದೆ ವಿಜಯಕುಮಾರ್, ತಾಯಿ ಪ್ರೇಮಲತಾ, ಸಹೋದರಿ ಪಿಯುಸಿ ವಿದ್ಯಾರ್ಥಿನಿ ತೃತ್ವಿಯವರನ್ನು ಅಗಲಿದ್ದಾರೆ.