ಸುಳ್ಯದ ನಾಡಹಬ್ಬ ಶ್ರೀ ಶಾರದಾಂಬ ದಸರಾ – 2024

0

ದುಗಲಡ್ಕ – ಕೊಯಿಕುಳಿ – ಬೀರಮಂಗಲ ಹಾಗೂ ಜಯನಗರ ವಾರ್ಡ್ ಸಮಿತಿ ರಚನೆ

ಸುಳ್ಯ ನಾಡಹಬ್ಬ ಶ್ರೀ ಶಾರದಾಂಬ ದಸರಾ ಉತ್ಸವದ ಪ್ರಯುಕ್ತ ಸುಳ್ಯ ನಗರ ಪಂಚಾಯತಿ ವ್ಯಾಪ್ತಿಯ ವಾರ್ಡ್ ಗಳಲ್ಲಿ ವಾರ್ಡ್ ಸಮಿತಿಯನ್ನು ರಚಿಸಲಾಗುತ್ತಿದ್ದು, ದುಗಲಡ್ಕ , ಕೊಯಿಕುಳಿ, ಬೀರಮಂಗಲ ಹಾಗೂ ಜಯನಗರ ವಾರ್ಡ್ ಸಮಿತಿಗಳನ್ನು ರಚಿಸಲಾಯಿತು.

ದುಗಲಡ್ಕ – ಕೊಯಿಕುಳಿ ವಾರ್ಡ್ ಸಮಿತಿ
ದುಗಲಡ್ಕದಲ್ಲಿ ದುಗಲಡ್ಕ ಮತ್ತು ಕೊಯಿಕುಳಿ ವಾರ್ಡ್ ಸಮಿತಿಯನ್ನು ರಚಿಸಲಾಯಿತು.
ದುಗಲಡ್ಕ ವಾರ್ಡ್ ಸಮಿತಿ ಅಧ್ಯಕ್ಷರಾಗಿ ದಯಾನಂದ ಸಾಲ್ಯಾನ್, ಕಾರ್ಯದರ್ಶಿಯಾಗಿ ಯತೀಶ್ ರೈ, ಸಂಚಾಲಕರಾಗಿ ದಿನೇಶ್ ಡಿ.ಕೆ. ಆಯ್ಕೆಯಾದರು. ವಾರ್ಡಿನ ಹಲವರನ್ನು ಸಮಿತಿ ಸದಸ್ಯರುಗಳನ್ನಾಗಿ ನೇಮಕ ಮಾಡಲಾಯಿತು.
ಕೊಯಿಕುಳಿ ವಾರ್ಡ್ ಸಮಿತಿ ಅಧ್ಯಕ್ಷರಾಗಿ ಶಿವಪ್ರಸಾದ್ ಕುದ್ಪಾಜೆ, ಕಾರ್ಯದರ್ಶಿಯಾಗಿ ರೂಪೇಶ್ ನೀರಬಿದಿರೆ ಹಾಗೂ ಸಂಚಾಲಕರಾಗಿ ನಾರಾಯಣ ನಾಯ್ಕ ಅವರನ್ನು ಆಯ್ಕೆ ಮಾಡಲಾಯಿತು. ಕೊಯಿಕುಳಿ ವಾರ್ಡ್ ನ ಹಲವನ್ನು ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

ಬೀರಮಂಗಲ ವಾರ್ಡ್ ಸಮಿತಿ

ಬೀರಮಂಗಲ ವಾರ್ಡ್ ಸಮಿತಿ ಸಭೆಯು ಬೀರಮಂಗಲದ ಕೊರಗಜ್ಜ ದೈವದ ಸಾನಿಧ್ಯದಲ್ಲಿ ನಡೆಯಿತು.
ವಾರ್ಡ್ ಸಮಿತಿ ಅಧ್ಯಕ್ಷರಾಗಿ ಅಜಿತ್ ಬಿ.ಟಿ., ಕಾರ್ಯದರ್ಶಿಯಾಗಿ ಅಪ್ಪು ಮುತ್ತಪ್ಪ ಹಾಗೂ ಸಂಚಾಲಕರಾಗಿ ಚಂದ್ರಶೇಖರ ಬೀರಮಂಗಲ ಅವರನ್ನು ಆಯ್ಕೆ ಮಾಡಲಾಯಿತು. ಬೀರಮಂಗಲ ವಾರ್ಡಿನ ಹಲವರನ್ನು ಸಮಿತಿ ಸದಸ್ಯರುಗಳನ್ನಾಗಿ ಆಯ್ಕೆ ಮಾಡಲಾಯಿತು.

ಜಯನಗರ ವಾರ್ಡ್ ಸಮಿತಿ


ಜಯನಗರ ವಾರ್ಡ್ ಸಮಿತಿಯನ್ನು ಜಯನಗರದ ಭಜನಾ ಮಂದಿರದ ಸಭಾಂಗಣದಲ್ಲಿ ರಚಿಸಲಾಯಿತು.
ಅಧ್ಯಕ್ಷರಾಗಿ ಪ್ರವೀಣ್ ಕುಮಾರ್ ಎ. ಎಂ., ಕಾರ್ಯದರ್ಶಿಯಾಗಿ ಚೇತನ್ ಕುಮಾರ್ ಹಾಗೂ ಸಂಚಾಲಕರಾಗಿ ನ.ಪಂ. ಸದಸ್ಯೆ ಶ್ರೀಮತಿ ಶಿಲ್ಪಾ ಸುದೇವ್ ಅವರನ್ನು ಆಯ್ಕೆ ಮಾಡಲಾಯಿತು. ಜಯನಗರ ವಾರ್ಡಿನ ಹಲವರು ಸಮಿತಿ ಸದಸ್ಯರುಗಳಾಗಿ ಆಯ್ಕೆಯಾದರು.

ಈ ಸಂದರ್ಭದಲ್ಲಿ ಶ್ರೀ ಶಾರದಾಂಬ ದಸರಾ ಸಮೂಹ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.