ಸುಬ್ರಹ್ಮಣ್ಯ: ಪೊಲೀಸರಿಗೆ ರಕ್ಷೆ ಕಟ್ಟಿ ರಕ್ಷಾಬಂಧನ ಆಚರಿಸಿದ ವನಿತೆಯರು

0

ವಾಣಿ ವನಿತಾ ಸಮಾಜ ಸುಬ್ರಹ್ಮಣ್ಯ ಇದರ ವತಿಯಿಂದ ಆ.19 ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ತೆರಳಿ ಸಬ್ ಇನ್ಸ್ಪೆಕ್ಟರ್ ಹಾಗೂ ಠಾಣಾ ಸಿಬ್ಬಂದಿಗಳಿಗೆ ಆರತಿ ಮಾಡಿ ರಕ್ಷೆ ಕಟ್ಟಿ ರಕ್ಷಾ ಬಂಧನ ಆಚರಿಸಿದರು.

ವಾಣಿ ವನಿತಾ ಸಮಾಜದ ಪುಷ್ಪ ಕೆ, ಶೋಭಾ ನಲ್ಲೂರಾಯಾ, ಸುಜಾತ ಗಣೇಶ್, ತ್ರಿವೇಣಿ ದಾಮ್ಲೆ,ವಿಶಾಲಾಕ್ಷಿ,ಕುಸುಮ, ರಕ್ಷಾಬಂಧನ ಕಾರ್ಯಕ್ರಮ ನಡೆಸಿದರು.


ಈ ಸಂದರ್ಭದಲ್ಲಿ  ಅರಕ್ಷಕ ಠಾಣಾಧಿಕಾರಿ ಕಾರ್ತಿಕ್  ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.