ಶಾಂತಿನಗರ ಬೆಟ್ಟಂಪಾಡಿ ಬಿಜೆಪಿ ಬೂತ್ ಸಮಿತಿ ರಚನೆ, ಅಧ್ಯಕ್ಷರಾಗಿ ಅವಿನ್ ಬೆಟ್ಟಂಪಾಡಿ, ಕಾರ್ಯದರ್ಶಿ ಶಿವಪ್ಪ ಕೆ

0

ಶಾಂತಿನಗರ ಬೆಟ್ಟಂಪಾಡಿ 177 ರ ಬೂತ್ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ನೂತನ ಅಧ್ಯಕ್ಷರಾಗಿ ಅವಿನ್ ಬೆಟ್ಟಂಪಾಡಿ, ಕಾರ್ಯದರ್ಶಿಯಾಗಿ ಶಿವಪ್ಪ ಕೆ. ಬಿ.ಎಲ್.ಎ 2 ಆಗಿ ಜಗದೀಶ್ ಎನ್.ಆರ್, ಮತಗಟ್ಟೆ ಏಜೆಂಟಾಗಿ ಹರೀಶ್ ಎಸ್, ಮಹಿಳಾ ಪ್ರತಿನಿಧಿಯಾಗಿ ದಿವ್ಯಾ ಕೇಶವ್, ಎಸ್.ಟಿ ಪ್ರಮುಖರಾಗಿ ಮಿಥುನ್ ಕೆ, ಎಸ್ಸಿ ಪ್ರಮುಖರಾಗಿ ಕೃಷ್ಣ ಜಿ ಹಾಗು ಕೃಷ್ಣಪ್ಪ ಕೆ, ಓ.ಬಿ.ಸಿ ಪ್ರಮುಖರಾಗಿ ನಾರಾಯಣ ಬೆಟ್ಟಂಪಾಡಿ, ಸಮಿತಿ ಸದಸ್ಯರಾಗಿ ಸುರೇಶ್ ವಿ.ಆರ್, ಗೌತಮ್ ಎಂ.ಸಿ, ಕೇಶವ ಕೆ, ಮಹೇಶ ಕೆ ಇವರುಗಳನ್ನು ಆಯ್ಕೆ ಮಾಡಲಾಯಿತು.


ಭಾರತೀಯ ಜನತಾ ಪಾರ್ಟಿಯ ಸುಳ್ಯ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಕುಸುಮಾದರ ಎ.ಟಿ, ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್.ಎಂ, ನಗರ ಪಂಚಾಯತ್ ಸದಸ್ಯ ಬುದ್ಧ ನಾಯ್ಕ, ಸಿ.ಎ ಬ್ಯಾಂಕಿನ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕರಾದ ಬಾಲಗೋಪಾಲ ಸೆರ್ಕಜೆ, ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಹರಿಣಾಕ್ಷಿ ನಾರಾಯಣ, ಹಿರಿಯರಾದ ಸುಂದರ್ ರೈ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.