ಸುಳ್ಯದಲ್ಲಿ ದ.ಕ ಜಿಲ್ಲಾ ಧ್ವನಿವರ್ಧಕ ಮತ್ತು ದೀಪಾಲಂಕರ ಮಾಲಕರ ಜಿಲ್ಲಾ ಸಂಘದ ಮಹಾಸಭೆ

0

ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಜಿಲ್ಲಾ ಸಂಘ ದಕ್ಷಿಣ ಕನ್ನಡ ಜಿಲ್ಲೆ ಇದರ ವಾರ್ಷಿಕ ಮಹಾಸಭೆ ಆ.21 ರಂದು ಸುಳ್ಯ ಜ್ಯೋತಿ ಸರ್ಕಲ್ ಬಳಿಯಿರುವ ಅಮೃತಭವನದಲ್ಲಿ ನಡೆಯಿತು.


ಮಹಾಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ರಾಜಶೇಖರ ಶೆಟ್ಟಿ ಕುಡ್ತಮುಗೇರು ವಹಿಸಿದರು.


ಈ ಸಭೆಯಲ್ಲಿ ನೂತನ ಜಿಲ್ಲಾ ಸಮಿತಿ ಪದಾಧಿಕಾರಿಗಳು ಆಯ್ಕೆ ಮಾಡಲಾಯಿತು.


ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಜಿಲ್ಲಾ ಸಂಘ ದಕ್ಷಿಣ ಕನ್ನಡ ಜಿಲ್ಲೆ 2024 – 2025 ರ ಸಾಲಿನ ಜಿಲ್ಲೆಯ ನೂತನ ಆಡಳಿತ ಮಂಡಳಿ ಸಮಿತಿ ಪದಾಧಿಕಾರಿಗಳಆಯ್ಕೆ ಪ್ರಕ್ರಿಯೆ ನಡೆಯಿತು.


ಗೌರವ ಅಧ್ಯಕ್ಷರಾಗಿ ರಾಜಶೇಖರ್ ಶೆಟ್ಟಿ ಬಂಟ್ವಾಳ, ಅಧ್ಯಕ್ಷರಾಗಿ ಧನರಾಜ್ ಶೆಟ್ಟಿ,ಉಪಾಧ್ಯಕ್ಷರಾಗಿ ಗಿರಿಧರ್ ಸ್ಕಂದ ಸುಬ್ರಹ್ಮಣ್ಯ, ವಿನೋದ್.ಕೆ ಮಂಗಳೂರು, ರಾಮಕೃಷ್ಣ ಪುತ್ತೂರು, ಚಂದ್ರಶೇಖರ್ ಬೆಳ್ತಂಗಡಿ ಉದಯ ಬಂಟ್ವಾಳ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಮಹೇಶ್ ಬೋಳಾರ್, ಕೋಶಾಧಿಕಾರಿಯಾಗಿ ಬೆನೆಟ್ ಡಿಸಿಲ್ವಾ, ಜೊತೆ ಕಾರ್ಯದರ್ಶಿಯಾಗಿ ಕೆ. ನಿತ್ಯಾನಂದ, ಶರತ್ ಎಣ್ಮೂರು, ಯೋಗೀಶ್ ಕಾವು , ವಸಂತ್ ಬೆಳ್ತಂಗಡಿ, ಸಂತೋಷ್ ಬಂಟ್ವಾಳ, ಗೌರವ ಸಲಹೆ ಗಾರರಾಗಿ ವಿ. ವಿ ಪೈ ಮಂಗಳೂರು, ಜೋಸೆಫ್ ಬೆಳ್ತಂಗಡಿ, ಲೋಕನಾಥ್ ಎಸ್. ಪಿ ಸುಳ್ಯ ಪ್ರದೀಪ್ ಪುತ್ತೂರು , ಸಂಘಟನಾ ಕಾರ್ಯದರ್ಶಿಯಾಗಿ ಶ್ರೀ ಧನುಷ್ ಎಲ್. ಸಾಲಿಯಾನ್ ಬೈಕಂಪ್ಪಾಡಿ ಶಾಫಿ ಪ್ರಗತಿ ಸೌಂಡ್ಸ್ ಸುಳ್ಯ ಮನೋಹರ್ , ಸಂಜೀವ ಬಿ. ಎಚ್ , ನಾರಾಯಣ ಗೌಡ ಬೆಳ್ತಂಗಡಿ, ರಾಜೇಶ್ ರೈ ಉಬರಡ್ಕ ಆಯ್ಕೆಯಾದರು.