ಗೌಡ ಯುವ ಸೇವಾ ಸಂಘ ಸುಳ್ಯದ ವತಿಯಿಂದ ಸಹಾಯಧನ ವಿತರಣೆ

0

ಇತ್ತೀಚಿಗೆ ನಿಧನರಾದ ಗುತ್ತಿಗಾರು ಗ್ರಾಮದ ನಿತ್ಯಾನಂದ
ಹೊಸೊಳಿಕೆ, ಜಬಳೆ ಇವರ ಮನೆಯವರಿಗೆ ಸುಳ್ಯ ಗೌಡ ಯುವ ಸೇವಾ ಸಂಘದ ವತಿಯಿಂದ ಆರ್ಥಿಕ ಸಹಕಾರವನ್ನು ಆ.22 ರಂದು ನೀಡಲಾಯಿತು.

ಗೌಡ ಯುವ ಸೇವಾ ಸಂಘ ನಿರ್ದೇಶಕರಾದ ನವೀನ್ ಜಾಕೆ ಯವರು ನಿತ್ಯಾನಂದ ಅವರ ಪತ್ನಿ ಹೇಮ ರಿಗೆ ಸಹಾಯಧನ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಹೆಚ್. ಬಿ ಕೇಶವ ಹೊಸೊಳಿಕೆ, ಜಯಂತ ಅಂಬೆಕಲ್ಲು, ರಾಮಚಂದ್ರ ಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.