ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಕೃಷ್ಣ ವೇಷ ಸ್ಪರ್ಧೆ

0

ಯಶೋಧೆಯಾಗಿ ಮಿಂಚಿದ ತಾಯಂದಿರು

ಸುಳ್ಯದ ಆಯುರ್ವೇದ ಕಾಲೇಜು ಮುಂಭಾಗವಿರುವ ಅಡ್ಕಾರ್ ಆರ್ಕೆಡ್‌ನಲ್ಲಿ ಕಾರ್ಯಚರಿಸುತ್ತಿರುವ ಅಂಜಲಿ ಮೊಂಟೆಸ್ಸರಿ ಸ್ಕೂಲ್‌ನಲ್ಲಿ ವಿದ್ಯಾರ್ಥಿಗಳಿಗೆ ಕೃಷ್ಣ ವೇಷ ಸ್ಪರ್ಧೆಯನ್ನು ಆ.26 ರಂದು ಹಮ್ಮಿಕೊಳ್ಳಲಾಯಿತು. ಪುಟಾಣಿ ಮಕ್ಕಳು ಕೃಷ್ಣ, ರಾಧೇಯಾಗಿ ಮಿಂಚಿದ್ರೆ, ಯಶೋಧೆಯಾಗಿ ಪೋಷಕರು ವೇಷ ಹಾಕಿದ್ದರು.

ತೀರ್ಪುಗಾರರಾಗಿ ಆಗಮಿಸಿದ ಹಳೆಗೇಟು ಆಯುರ್ಧಾಮ ಆಸ್ಪತ್ರೆಯ ಸಂಚಾಲಕಿ ಡಾ.ಸುಷ್ಮಾ ಶೆಟ್ಟಿ, ಅಡ್ಕಾರ್ ಆರ್ಕೇಡ್ ಮಾಲಕಿ ಚೈತ್ರಾ ದಿನೇಶ್ ಆಗಮಿಸಿ ಕಾರ್ಯಕ್ರಮ ವನ್ನು ದೀಪ ಪ್ರಜ್ವಲಿಸಿ, ಉದ್ಘಾಟಿಸಿದರು.

ಶಾಲಾ ವಿದ್ಯಾರ್ಥಿನಿ ಇಶಿತಾ ಪ್ರಾರ್ಥಿಸಿ, ಸಾಧ್ವಿನಿ ಸ್ವಾಗತಿಸಿದರು. ಅಂಜಲಿ ಮೊಂಟೆಸ್ಸರಿ ಸ್ಕೂಲ್‌ನ ಅಧ್ಯಕ್ಷ ಶುಭಕರ್, ಶಾಲಾ ಸಂಚಾಲಕಿ ಗೀತಾಂಜಲಿ ಟಿ.ಜಿ., ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು.