ಬಳ್ಪ: ವಿಕ್ರಮ ಯುವಕ ಮಂಡಲ ಬಳ್ಪ ಮತ್ತುಶ್ರೀ ಧರ್ಮಶಾಸ್ತವೂ ಭಜನಾ ಮಂಡಳಿ ಬಳ್ಪ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ

0

ವಿಕ್ರಮ ಯುವಕ ಮಂಡಲ ಬಳ್ಪ ಮತ್ತು
ಶ್ರೀ ಧರ್ಮಶಾಸ್ತವೂ ಭಜನಾ ಮಂಡಳಿ ಬಳ್ಪ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆ ಆ. 25ರಂದು ವಿಕ್ರಮ ಯುವಕ ಮಂಡಲದ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದ ಉಧ್ಟಾಟನೆಯನ್ನು ಕುಕ್ಕೇಶ್ರಿ ಸುಬ್ರಹ್ಮಣ್ಯ ದೇವಸ್ಥಾನದ ಸಮಗ್ರ ಮೇಲ್ವಿಚಾರಣ ಸಮಿತಿ ಸದಸ್ಯರಾದ ಅಚ್ಚುತ ಗೌಡ ಆಲ್ಕಬೆ ನೆರವೇರಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಬಳ್ಪ ಸ.ಉ.ಹಿ.ಪ್ರಾ. ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಉಮೇಶ್ ಪೂಜಾರಿ ಬುಡೆಂಗಿ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕುಸುಮಾಧರ ಕೋಡಿಬೈಲು ಶ್ರೀ ಧರ್ಮಶಾಸ್ತಾ ಭಜನಾ ಮಂಡಳಿ ಅಧ್ಯಕ್ಷ ಸುರೇಶ್ ಆಲ್ಕಬೆ ಬಳ್ಪ ಗ್ರಾ.ಪಂ. ಸದಸ್ಯೆ ಶ್ರೀಮತಿ ಶೈಲಜಾ ಎಣ್ಣೆಮಜಲು, ಶ್ರೀ ಕ್ಷೇತ್ರ.ಗ್ರಾಮಾಭಿವೃದ್ದಿ ಯೋಜನೆ ಬಳ್ಪ ಇದರ ಸೇವಾನಿರತೆ ಶ್ರೀಮತಿ ಭವ್ಯ ಕಾಯರ ಮತ್ತು ಯುವಕ ಮಂಡಲದ ಅಧ್ಯಕ್ಷ ಶಶಿಧರ ಎಣ್ಣೆಮಜಲು ಉಪಸ್ಥಿತಿತರಿದ್ದರು.


ಜನ್ಮಾಷ್ಠಮಿ ಪ್ರಯುಕ್ತ ಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆ, ಸಾರ್ವಜನಿಕರಿಗೆ ಮಡಿಕೆ ಒಡೆಯವುದು, ಹಗ್ಗಜಗ್ಗಾಟ, ತ್ರೋಬಾಲ್ ಪಂದ್ಯಾಟ, ಲಗೋರಿ ಪಂದ್ಯಾಟ, ಸಂಗೀತ ಕುರ್ಚಿ ಇನ್ನಿತರ ಕಾರ್ಯಕ್ರಮ ನಡೆಯಿತು. ಸಂಜೆ ಸಮಾರೋಪ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಅತಿಥಿಗಳಾಗಿ ಯುವಕ ಮಂಡಲದ ಪೂರ್ವಾಧ್ಯಕ್ಷರುಗಳಾದ ಸುಬ್ರಹ್ಮಣ್ಯ ಕುಳ, ಶಿವಾನಂದ ಎಣ್ಣೆಮಜಲು, ಆನಂದ ಚೆನ್ನಕಜೆ, ಪ್ರಸನ್ನ ವೈ.ಟಿ, ಶಿವಕುಮಾರ್ ಎಣ್ಣೆಮಜಲು, ಬಾಸ್ಕರ ಕೊರಪ್ಪಣೆ, ಉಮೇಶ್ ಕುಳ ಮತ್ತು ಗ್ರಾ.ಪಂ. ಅಧ್ಯಕ್ಷ ಹರ್ಷಿತ್ ಕಾರ್ಜ ಉಪಸ್ಥಿತಿತರಿದ್ದರು. ಗಗನ್ ಕಟ್ಟೆಮನೆ ಸ್ವಾಗತಿಸಿ, ಚಿದಾನಂದ ಕಲ್ಲೇರಿ ವಂದಿಸಿದರು. ಮಹೇಶ್ ಗೆಜ್ಜೆ ವಿಜೇತರ ಪಟ್ಟಿ ವಾಚಿಸಿದರು. ರಜನೀಶ್ ಕುಳ ಕಾರ್ಯಕ್ರಮ ನಿರೂಪಿಸಿದರು.