ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಇಂಟಕ್ ಕಾಂಗ್ರೆಸ್‌

0

ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷರಾಗಿ ಮುರುಗನ್ ಅಡ್ಯಡ್ಕ ಆಯ್ಕೆ

ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಇಂಟಕ್ ಕಾಂಗ್ರೆಸ್ಸಿನ ಬೆಂಗಳೂರು ಕೇಂದ್ರ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ತೊಡಿಕಾನ ಗ್ರಾಮದ ಮುರುಗನ್ ಪಿ. ಅಡ್ಯಡ್ಕ ಅವರನ್ನು ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಅನುಮೋದನೆ ಮೇರೆಗೆ ನೇಮಿಸಿ ಪಕ್ಷ ಆದೇಶ ಹೊರಡಿಸಿದೆ.

ಮುರುಗನ್ ಅಡ್ಯಡ್ಕ ಅವರು ಸಚಿವ ರಾಮಲಿಂಗಾ ರೆಡ್ಡಿ , ಬೆಂಗಳೂರು ಕೇಂದ್ರದ ಡಿ‌.ಸಿ.ಸಿ. ಅಧ್ಯಕ್ಷ ಕೆ.ವಿ.ಗೌತಮ್, ಕೆ.ಪಿ.ಸಿ.ಸಿ. ಐ.ಎನ್.ಟಿ.ಯು.ಸಿ. ರಾಜ್ಯಾಧ್ಯಕ್ಷ ಡಿ. ಲಕ್ಷ್ಮೀ ವೆಂಕಟೇಶ್ ಚಾಮರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ವಿನಾಯಕ ಅವರ ಉಪಸ್ಥಿತಿಯಲ್ಲಿ ಆದೇಶ ಪತ್ರವನ್ನು ಸ್ವೀಕರಿಸಿದರು.
ಬೆಂಗಳೂರಿನ ಕೆ.ಪಿ.ಸಿ.ಸಿ. ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮುರುಗನ್ ಅವರು ಕಾಂಗ್ರೆಸ್ ನಾಯಕರಾಗಿದ್ದು, ತೊಡಿಕಾನ ಗ್ರಾಮದ ಅಡ್ಯಡ್ಕ ನಿವಾಸಿಯಾಗಿದ್ದಾರೆ.

.