ಕಾಯರ್ತೋಡಿ: ನಿವೃತ್ತ ಪ್ರಾಂಶುಪಾಲ ಲಕ್ಷ್ಮಣ ಗೌಡ ಕುಡೆಕಲ್ಲು ನಿಧನ

0

ಆಲೆಟ್ಟಿ ಗ್ರಾಮದ ಕುಡೆಕಲ್ಲು ಮನೆತನದ ಹಿರಿಯರಾದ ಕಾಯರ್ತೋಡಿ ನಿವಾಸಿ ನಿವೃತ್ತ ಪ್ರಾಂಶುಪಾಲ ಲಕ್ಷ್ಮಣ ಗೌಡ ರವರು
ಆ.27 ರಂದು ವಯೋ ಸಹಜವಾಗಿ ತನ್ನ ಸ್ವಗೃಹದಲ್ಲಿನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಶ್ರೀಮತಿ ಜಾನಕಿ,ಪುತ್ರಿಯರಾದ ಶ್ರೀಮತಿ ಅಶ್ವಿನಿ, ಶ್ರೀಮತಿ ಧರ್ಮಶ್ರೀ ಹಾಗೂ ಅಳಿಯಂದಿರನ್ನು,
ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರು ಕೊಡಗು ಜಿಲ್ಲೆಯ ಭಾಗಮಂಡಲದ ಕಾವೇರಿ ಜೂನಿಯರ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು.