ಕಳಂಜದಲ್ಲಿ ಜೇನು ಕೃಷಿ ತರಬೇತಿ ಕಾರ್ಯಾಗಾರ

0

ಕಳಂಜದ ಅಯ್ಯನಕಟ್ಟೆಯಲ್ಲಿ ಇಂದು ಜೇನು ಕೃಷಿ ತರಬೇತಿ ಕಾರ್ಯಾಗಾರ ಪಂಡಿತ್ ದೀನ್ ದಯಾಳ್ ಸಭಾಭವನದಲ್ಲಿ ನಡೆಯಿತು.

ತರಬೇತಿ ಕಾರ್ಯಾಗಾರವನ್ನು ಶಾಸಕಿ ಭಾಗೀರಥಿ ಮುರುಳ್ಯ ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ಕಳಂಜ ಗ್ರಾ.ಪಂ ಅಧ್ಯಕ್ಷ ಬಾಲಕೃಷ್ಣ ಬೇರಿಕೆ, ಉಪಾಧ್ಯಕ್ಷೆ ಪ್ರೇಮಲತಾ, ತೋಟಗಾರಿಕೆ ಇಲಾಖೆಯ ಸುಹಾನ, ಕಾರ್ಯಾಗಾರದ ತರಬೇತುದಾರರಾದ ಮಂಜುನಾಥ, ವೀರಪ್ಪ ಗೌಡ, ಕೀರ್ತನ್ ಉಪಸ್ಥಿತರಿದ್ದರು.

ಕಳಂಜ ಗ್ರಾ.ಪಂ ಸಿಬ್ಬಂದಿ ಗಿರಿಧರ ಕಳಂಜ ಪ್ರಾರ್ಥಿಸಿದರು. ತೋಟಗಾರಿಕಾ ಇಲಾಖೆಯು ಅರಬಣ್ಣ ಪೂಜಾರ್ ಸ್ವಾಗತಿಸಿ ನಿರೂಪಿಸಿದರು.