ವಿಘ್ನವಿನಾಯಕನ ಆರಾಧನೆಗಾಗಿ ಸಜ್ಜಾಗುತ್ತಿದ್ದಾರೆ. ಶ್ರೀ ಉದ್ಭವ ವಿನಾಯಕ ಸೇವಾ ಸಮಿತಿಯ ಯುವಕರು…!!

0

ಮಡಿಕೇರಿ:-ಗೌರಿ ಪುತ್ರ ವಿನಾಯಕನನ್ನು ಆರಾಧನೆಗೆ ದಿನಗಣನೇ ಅರಂಭವಾಗಿದೆ.ಈಗಾಗಲೇ ವಿವಿಧ ಗಣೇಶೋತ್ಸವ ಸಮಿತಿಯ ಸದಸ್ಯರು ಗಣಪತಿ ಪ್ರತಿಷ್ಟಾಪನೆ ಮಾಡಲು ಎಲ್ಲಾ ರೀತಿಯ ತಯಾರಿಗಳನ್ನು ನಡೆಸುತ್ತಿದ್ದಾರೆ. ಅದರಂತೆ ಮಂಜಿನ ನಗರಿ ಮಡಿಕೇರಿ ನಗರದ ಪುಟಾಣಿ ನಗರದ ಶ್ರೀ ಉದ್ಭವ ವಿನಾಯಕ ಸೇವಾ ಸಮಿತಿಯ ಯುವಕರ ತಂಡ ಗಣೇಶೋತ್ಸವದ ಆಚರಣೆ ಬರದಿಂದ ಸಿದ್ದತೆ ಕಾರ್ಯಗಳನ್ನು ನಡೆಸುತ್ತಿದ್ದಾರೆ.

31ನೇ ವರ್ಷದ ಗಣೇಶ ಹಬ್ಬವನ್ನು ಆಚರಣೆ ಮಾಡಲು ಹಗಲಿರುಳು ಯುವಕರ ತಂಡ ಶ್ರಮಿಸುತ್ತಿದ್ದಾರೆ. ಈಗಾಗಲೇ ಪುಟಾಣಿನಗರ ಎಂಟ್ರಿ ಕೋಡುವ ರಸ್ತೆಯಲ್ಲಿ ಈಗಾಗಲೇ ವೇಲ್ ಕಮ್ ಭೋಡ್೯ ಹಾಕಿದ್ದಾರೆ.ಅಲ್ಲದೇ ಈ ವರ್ಷ ಏಳು ದಿನಗಳ ಕಾಲ ಗಣಪತಿ ಮೂರ್ತಿಗೆ ವಿಶೇಷ ಪೂಜೆ ಪ್ರಾರ್ಥನೆಗಳೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಯುವಕ ತಂಡ ಸಜ್ಜಾಗಿದೆ.

ಈ ಧಾರ್ಮಿಕ ಕಾರ್ಯಗಳಿಗೆ ಮಡಿಕೇರಿ ಶಾಸಕ ಮಂಥರ್ ಗೌಡ. ಮುಡಾ ಅದ್ಯಕ್ಷ ರಾಜೇಶ್ ಯಲಾಪ್ಪ‌ ಸೇರಿದಂತೆ ಹಲವಾರು ಜನರು ಪುಟಾಣಿ ನಗರದ ಯುವಕರೊಂದಿಗೆ ಕೈಜೋಡಿಸಿರುವುದು ಮತ್ತೊಂದು ವಿಶೇಷವಾಗಿದೆ.