ಕೋಟೆಮುಂಡುಗಾರಿನಲ್ಲಿ 33ನೇ ವರ್ಷದ ಶ್ರೀ ಗಣೇಶೋತ್ಸವದ ಪ್ರಯುಕ್ತ ಗಣೇಶನ ಪ್ರತಿಷ್ಠೆ

0

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಟೆಮುಂಡುಗಾರು ಇದರ ವತಿಯಿಂದ ಕೋಟೆಮುಂಡುಗಾರಿನ ಯುವಕ ಮಂಡಲ ಕಟ್ಟಡದಲ್ಲಿ ಶ್ರೀ ಗಣೇಶನ ಪ್ರತಿಷ್ಠೆ ನಡೆಯಿತು.

ಬೆಳಗ್ಗೆ ಮೂರ್ತಿ ಪ್ರತಿಷ್ಠಾಪನೆ, ಬಳಿಕ ಒಂದು ಗಂಟೆ ಭಜನಾ ಕಾರ್ಯಕ್ರಮ ನಡೆಯಿತು. ಗಣಪತಿ ಹವನ, ಅಕ್ಷರಾಭ್ಯಾಸ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಬಳಿಕ ಗಣೇಶೋತ್ಸವ ಅಂಗವಾಗಿ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ನಡೆದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ನಡೆದು. ಮಧ್ಯಾಹ್ನ ಭೋಜನ ನಡೆದು ಅಪರಾಹ್ನ ಗಂಟೆ 3.00ರಿಂದ 5.00 ತನಕ ಯುವಕ ಮಂಡಲ ಕಳಂಜ ಇದರ ಹವ್ಯಾಸಿ ಕಲಾವಿದರಿಂದ “ಮಕರಾಕ್ಷ ಕಾಳಗ” ಯಕ್ಷಗಾನ ಪ್ರದರ್ಶನ ನಡೆಯಲಿದೆ. ಬಳಿಕ ಸಂಜೆಯ ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯಲಿದೆ. ಬಳಿಕ ಶೋಭಾಯಾತ್ರೆ ನಡೆದು ಅಯ್ಯನಕ ಕಟ್ಟೆ ಹೊಳೆಯಲ್ಲಿ ಮೂರ್ತಿವಿಸರ್ಜನೆ ನಡೆಯಲಿದೆ.