ಜಯನಗರ ಶ್ರೀ ಗಜಾನನ ಭಜನಾ ಮಂದಿರದಲ್ಲಿ ಗಣೇಶೋತ್ಸವ

0

ಜಯನಗರ ಶ್ರೀ ಗಜಾನನ ಭಜನಾ ಮಂದಿರದಲ್ಲಿ ಗಣೇಶೋತ್ಸವ ಕಾರ್ಯಕ್ರಮ ಸೆ. 7ರಂದು ನಡೆಯಿತು.


ಬೆಳಿಗ್ಗೆ ಗಣಹೋಮ ಪೂಜಾ ಕಾರ್ಯಕ್ರಮ ನಡೆದು ಪ್ರಸಾದ ವಿತರಣೆ ನಡೆಯಿತು. ಪೂಜಾ ಕಾರ್ಯವನ್ನು ಅರ್ಚಕರಾದ ಶ್ರೀ ಹರಿ ಯಳಚ್ಚಿತ್ತಾಯರವರು ನೆರವೇರಿಸಿದರು.


ಶ್ರೀ ಗಜಾನನ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಬಳಿಕ ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಶೇಷವಾಗಿ ಮಕ್ಕಳಿಗೆ ಕಬಡ್ಡಿ ಪಂದ್ಯಾಟವನ್ನು ಆಯೋಜಿಸಲಾಗಿತ್ತು.


ಸಂಜೆ ಸಮಾರೋಪ ಸಮಾರಂಭ ನಡೆದು ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.


ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ವಿಶ್ವನಾಥ್ ನಾಯ್ಕ್, ಕಾರ್ಯದರ್ಶಿ ಅನು ನಾಗರಾಜ್,ಕೋಶಾಧಿಕಾರಿ ಮಾಧವ ಟೈಲರ್ ಮಹಿಳಾ ಸಮಿತಿ ಅಧ್ಯಕ್ಷ ಶ್ರೀಮತಿ ಹೇಮಾ ಶಾಂತಪ್ಪ ಹಾಗೂ ಪದಾಧಿಕಾರಿಗಳಾದ ಪ್ರಸಾದ್ ಜಯನಗರ, ಸುರೇಂದ್ರ ಕಾಮತ್, ಪ್ರವೀಣ್ ಕುಮಾರ್ ಎ ಎಂ ಮತ್ತು ನೂರಾರು ಮಂದಿ ಸ್ಥಳೀಯ ಭಕ್ತಾದಿಗಳು ಭಾಗವಹಿಸಿದ್ದರು.