ಅಮೈಮಡಿಯಾರು: ಗಣೇಶ ಚತುರ್ಥಿ ಕಾರ್ಯಕ್ರಮ

0

ವಿನಾಯಕ ಮಿತ್ರ ಬಳಗ ಅಮೈಮಡಿಯಾರು ಮತ್ತು ಗೌರಿ ಯುವತಿ ಮಂಡಲ ಹಾಗೂ ಊರವರ ಸಂಯುಕ್ತ ಆಶ್ರಯದಲ್ಲಿ 29 ನೇ ವರ್ಷದ ಗಣೇಶ ಚತುರ್ಥಿ ಕಾರ್ಯಕ್ರಮದ ಕ್ರೀಡಾಕೂಟ, ಗೌರವಾರ್ಪಣೆ, ಪ್ರತಿಭಾ ಪುರಸ್ಕಾರ ಮತ್ತು ಸಮಾರೋಪ ಸಮಾರಂಭವು ಅಮೈಮಡಿಯಾರಿನಲ್ಲಿ ಸೆ.7 ರಂದು ನಡೆಯಿತು.

ಕಾರ್ಯಕ್ರಮವನ್ನು ಮಿತ್ರಬಳಗದ ಸಲಹಾ ಸಮಿತಿ ಸದಸ್ಯ ಹರೀಶ್ ಉಬರಡ್ಕ ಉದ್ಘಾಟಿಸಿದರು.


ಕ್ರೀಡಾಕೂಟವನ್ನು ರಾಷ್ಟ್ರಮಟ್ಟದ ವಾಲಿಬಾಲ್ ತೀರ್ಪುಗಾರರಾದ ಮನೋಜ್ ಸೂಂತೋಡು ಉದ್ಘಾಟಿಸಿದರು. ಅಧ್ಯಕ್ಷತೆ ಯನ್ನು ಗೌರಿ ಯುವತಿ ಮಂಡಲದ ಅಧ್ಯಕ್ಷೆ ಶ್ರೀಮತಿ ಭಾಗೀರಥಿ ರಾಮಕೃಷ್ಣ ಸೂoತೋಡು ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಶ್ರೀಮತಿ ಚಿತ್ರಾಕುಮಾರಿ ಉಪಸ್ಥಿತರಿದ್ದರು.


ನಂತರ ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆಯಿತು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿನಾಯಕ ಮಿತ್ರ ಬಳಗದ ಅಧ್ಯಕ್ಷ ವಿದ್ಯಾಧರ ಹರ್ಲಡ್ಕ ಅಧ್ಯಕ್ಷತೆ ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ಮಿತ್ರಬಳಗದ ಸಲಹಾ ಸಮಿತಿ ಸದಸ್ಯ ಪಿ.ಎಸ್ ಗಂಗಾಧರ್, ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಸೂಂತೋಡು, ಮಿತ್ರ ಬಳಗದ ಸಲಹಾ ಸಮಿತಿ ಸದಸ್ಯ ಸುರೇಶ್ ಎಂ.ಎಚ್, ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ರಾಜೇಶ್ ಭಟ್ ನೆಕ್ಕಿಲ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಸ್ಪರ್ಧೆಗಳ ಬಹುಮಾನ ವಿತರಣೆ ನಡೆಯಿತು.