ಜಾರಿಗೆಮನೆ ಚೆನ್ನಪ್ಪ ಕರ್ಕೇರ ಅಲೆಕ್ಕಾಡಿ ಶ್ರದ್ಧಾಂಜಲಿ ಕಾರ್ಯಕ್ರಮ

0

ಅಲೆಕ್ಕಾಡಿ ಜಾರಿಗೆಮನೆ ಚೆನ್ನಪ್ಪ ಕರ್ಕೇರ ರವರು ಆ.28 ರಂದು ನಿಧನರಾಗಿದ್ದು,ಅವರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಇಂದು ನಡೆಯಿತು.ನುಡಿನಮನ ಸಲ್ಲಿಸಿದ ಶ್ರೀಮತಿ ಚಂಚಲಾಕ್ಷಿ ತೇಜೋಮಯ ಮಾತನಾಡಿ ಚಿಕ್ಕ ಸಂಸಾರವನ್ನು ಚೊಕ್ಕವಾಗಿ ನಡೆಸಿ, ಕಷ್ಟ ಜೀವನವನ್ನು ಎದುರಿಸಿ ಸಮಾಜಕ್ಕೆ ಮಾದರಿಯಾದವರು.

ಚಾಲಕ ವೃತ್ತಿಯಲ್ಲಿ ತೃಪ್ತಿ ಕಂಡವರು ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಚೆನ್ನಪ್ಪ ಕರ್ಕೇರ ರವರ ಪತ್ನಿ ಚಂದ್ರಾವತಿ ಅಲೆಕ್ಕಾಡಿ,ಪುತ್ರರಾದ ಸಂದೇಶ್ ಕುಮಾರ್, ಸಂತೋಷ್ ಕುಮಾರ್, ಸೊಸೆಯಂದಿರಾದ ಶ್ರೀಮತಿ ಚೈತ್ರ, ಶ್ರೀಮತಿ ಯಶೋಧ, ಪುತ್ರಿ ಸಂಗೀತ ಕುಮಾರಿ, ಅಳಿಯ ಶಶಿಕುಮಾರ್,ಮೊಮ್ಮಕ್ಕಳು, ಕುಟುಂಬಸ್ಥರು, ಹಿತೈಷಿಗಳು ಉಪಸ್ಥಿತರಿದ್ದರು.