ದಕ್ಷಿಣ ಕನ್ನಡ ಜಿಲ್ಲಾ ಸಮಾಜಶಾಸ್ತ್ರ ಸಂಘದ ಅಧ್ಯಕ್ಷರಾಗಿ ಮೂರನೇ ಬಾರಿ ಆಯ್ಕೆಯಾದ ಶಿವರಾಮ ನಾಯ್ಕ ಕೆ.

0

ದಕ್ಷಿಣ ಕನ್ನಡ ಜಿಲ್ಲಾ ಸಮಾಜಶಾಸ್ತ್ರ ಸಂಘದ ಅಧ್ಯಕ್ಷರಾಗಿ ಸ. ಪ. ಪೂ. ಕಾ. ಸುಳ್ಯ ದ ಸಮಾಜಶಾಸ್ತ್ರ ಉಪನ್ಯಾಸಕ ಶಿವರಾಮ ನಾಯ್ಕ ಕೆ ಯವರು ಮೂರನೇ ಬಾರಿಗೆ ಆಯ್ಕೆಯಾಗಿರುತ್ತಾರೆ. ಇವರು ಈ ಹಿಂದೆಯೂ ಎರಡು ಬಾರಿ ಸಂಘದ ಚುಕ್ಕಾಣಿಯನ್ನು ಹಿಡಿದಿದ್ದರು. ಕೊರೋನ ಲಾಕ್ ಡೌನ್ ಅವಧಿಯಲ್ಲಿ ತರಗತಿಗಳು ನಡೆಯದೇ ಇದ್ದ ಸಂಧರ್ಭದಲ್ಲಿಯೂ ಸಂಘದ ಅಧ್ಯಕ್ಷ ರಾಗಿದ್ದಲ್ಲದೆ, ದಕ್ಷಿಣ ಕನ್ನಡ ಜಿಲ್ಲಾ ಪ್ರಾಶುಪಾಲರ ಸಂಘದ ನೇತೃತ್ವದಲ್ಲಿ ನಡೆದ ಆನ್ಲೈನ್ ತರಗತಿಗಳಲ್ಲಿ ತಾವು ಕೂಡ ಪಾಲ್ಗೊಂಡು ಭೋದನೆ ಮಾಡಿ ವಿದ್ಯಾರ್ಥಿಗಳಿಗೆ ನೆರವಾಗಿದ್ದರು.

ಅಲ್ಲದೇ ಅದೇ ಸಂಧರ್ಭದಲ್ಲಿ ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ passing package ಪ್ರತಿಗಳನ್ನು ತಾವೇ ರಚಿಸಿ ರಾಜ್ಯವಾರು ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಪ್ರತಿಪಾಲೇಕ್ಷೆ ಇಲ್ಲದೇ ಅನುವು ಮಾಡಿ ಕೊಟ್ಟಿರುತ್ತಾರೆ.