ಡಾ|| ಮುರಲೀಮೋಹನ್ ಚೂಂತಾರು ರವರಿಗೆ ರೋಟರಿ ಸಂಸ್ಥೆಯಿಂದ“ನೇಷನ್ ಬಿಲ್ಡರ್ ಅವಾರ್ಡ್”

0

ದಂತ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯ್ಯಾಪಕರಾಗಿ, ವೈದ್ಯಕೀಯ ಲೇಖನಗಳ ಪತ್ರಿಕಾ ಅಂಕಣಕಾರರಾಗಿ, ಹತ್ತಾರು ವೈದ್ಯಕೀಯ ಜಾಗೃತಿ ಪುಸ್ತಕಗಳನ್ನು ಬರೆದು ಪ್ರಕಟಿಸಿ ವೈದ್ಯ ಸಾಹಿತಿಯೆಂದೆನಿಸಿರು ದ.ಕ.ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾಗಿ ರಾಷ್ಟ್ರಪತಿಗಳಿಂದ ಶ್ಲಾಘನೀಯ ಸೇವಾ ಪದಕ ಪಡೆದಿರುವ ಡಾ|| ಮುರಲೀಮೋಹನ್ ಚೂಂತಾರುರವರಿಗೆ ರೋಟರಿ ಸಂಸ್ಥೆಯಿಂದ ರಾಷ್ಟ್ರ ನಿರ್ಮಾಣದಲ್ಲಿ ಶ್ರಮಿಸಿದ ಸಾಧಕರಿಗೆ ಕೊಡಮಾಡುವ “ನೇಷನ್ ಬಿಲ್ಡರ್ ಅವಾರ್ಡ್-2024” ಲಭಿಸಿದೆ.
ಸೆ. 10ರಂದು ಮಂಗಳೂರು ನಗರದ ರೋಟರಿ ಬಾಲಭವನದಲ್ಲಿ ಜರಗಿದ ಗುರುವಂದನಾ ಕಾರ್ಯಕ್ರಮದಲ್ಲಿ ಡಾ|| ಮುರಲೀಮೋಹನ್ ಚೂಂತಾರುರವರು ತನಗೆ ನೀಡಿದ ಈ ರಾಷ್ಟ್ರ ನಿರ್ಮಾಣ ಪ್ರಶಸ್ತಿಯ ಗೌರವವನ್ನು ಸ್ವೀಕರಿಸುತ್ತಾ, ಈ ಗೌರವ ಶಿಕ್ಷಣ ಹಾಗೂ ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಮಹಾನ್‍ಚೇತನಗಳಿಗೆ ಅರ್ಪಣೆಯೆಂದರು. ಸನ್ಮಾನ ಕಾರ್ಯಕ್ರಮವನ್ನು ರೋಟರಿ ಮಾಜಿ ಗವರ್ನರ್ ರೋ. ಕೆ. ಕೃಷ್ಣ ಶೆಟ್ಟಿ, ರೋಟರಿ ಜಿಲ್ಲಾ ಕಾರ್ಯದರ್ಶಿ (ತರಬೇತಿ) ಡಾ|| ಶಿವಪ್ರಸಾದ್, ರೋಟರಿ ಸಹಾಯಕ ಗವರ್ನರಾದ ವಿಶ್ವನಾಥ ಶೆಟ್ಟಿ ನೆರವೇರಿಸಿದರು.