ಸುದ್ದಿ ಬಿಡುಗಡೆ ಮತ್ತು ಷರಾ ಪ್ರಕಾಶನದ ಆಶ್ರಯದಲ್ಲಿ ದೇಶ ಭಕ್ತಿ ‌ಗಾಯನ ಸ್ಪರ್ಧೆ

0

ಸೈಂಟ್ ಜೋಸೆಫ್ ಶಾಲೆ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ

ಸುದ್ದಿ ಸಮೂಹ ಸಂಸ್ಥೆ ಸುಳ್ಯ‌ ಮತ್ತು ಷರಾ ಪ್ರಕಾಶನ‌ ಸುಳ್ಯ ಇದರ ವತಿಯಿಂದ ಸ್ವಾತಂತ್ರ್ಯೋತ್ಸವ ಅಂಗವಾಗಿ ನಡೆದ “ದೇಶ ಭಕ್ತಿ ಗೀತೆ ಗಾಯನ” ಸ್ಪರ್ಧೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಸೈಂಟ್ ಜೊಸೆಫ್ ಶಾಲೆ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಸೆ. 12 ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ರೆ.ಪಾ ವಿಕ್ಟರ್ ಡಿಸೋಜ ವಹಿಸಿದರು.


ಸುಳ್ಯ ಗಾಂಧಿನಗರ ಕೆಪಿಎಸ್ ಶಾಲೆ ಪ್ರಾಧ್ಯಾಪಕ ಸಮದ್ ಬಹುಮಾನ ವಿತರಿಸಿದರು.
ಶಾಲಾ ರಕ್ಷಕ ಸಮಿತಿಗಳ ಅಧ್ಯಕ್ಷರಾದ ಹೇಮಂತ ಕೊಡಿಯಾಲಬೈಲ್, ಎಂ ಜೆ ಶಶಿಧರ ,ಮುಖ್ಯ ಶಿಕ್ಷಕಿ ಸಿಸ್ಟರ್ ಸ್ಟೆಲ್ಲಾ ಉಪಸ್ಥಿತರಿದ್ದರು.


ಸುದ್ದಿ ಬಿಡುಗಡೆಯ ವರದಿಗಾರ ಶರೀಫ್ ಜಟ್ಟಿಪಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು ವರದಿಗಾರ ಗಣೇಶ ಕುಕ್ಕುತ್ತಡಿ, ಜಾಹಿರಾತು ವಿಭಾಗದ ಪ್ರಜ್ಞಾ ಎಸ್ ನಾರಾಯಣ,ಅಕೌಂಟ್ ವಿಭಾಗದ ಚೈತ್ರ ಮುಳ್ಯ ವಿದ್ಯಾರ್ಥಿಗಳು, ಶಿಕ್ಷಕ ವೃಂದ ಇದ್ದರು.
ಶಿಕ್ಷಕ ಭಾನುಪ್ರಕಾಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು