ಪೆರಾಜೆ: ಚಿಗುರು ಯುವಕ ಮಂಡಲದ ವಾರ್ಷಿಕ ಮಹಾಸಭೆ

0

ನೂತನ ಪದಾಧಿಕಾರಿಗಳ ಆಯ್ಕೆ

2023-24 ನೇ ಸಾಲಿನ ಚಿಗುರು ಯುವಕಮಂಡಲ(ರಿ) ಪೆರಾಜೆ ಇದರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಭುವನ್ ಕುಂಬಳಚೇರಿಯವರ ಅಧ್ಯಕ್ಷತೆಯಲ್ಲಿ ಶ್ರಿ ವಯನಾಟ್ ಕುಲವನ್ ದೈವಸ್ಥಾನ ಇದರ ಸಭಾಂಗಣದಲ್ಲಿ ನಡೆಯಿತು .

ಹಾಲಿ ವರ್ಷದ ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಮಂಡನೆಯನ್ನು ಸಭೆಯಲ್ಲಿ ಮಾಡಲಾಯಿತು . ನಂತರ ನಡೆದ ಸಭೆಯಲ್ಲಿ 2024-25ನೇ ಸಾಲಿಗೆ ನೂತನ ಆಡಳಿತಮಂಡಳಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ರಮೇಶ್ ಮಜಿಕೋಡಿ ,ಉಪಾಧ್ಯಕ್ಷರಾಗಿ ದಿವ್ಯಪ್ರಕಾಶ್ ಕೊಳಂಗಾಯ ,ಕಾರ್ಯದರ್ಶಿಯಾಗಿ ಯತಿಶ್ಯಾಮ್ ಕುಂಬಳಚೇರಿ ಮತ್ತು ಕೋಶಾಧಿಕಾರಿಯಾಗಿ ಹರ್ಷಿತ್ ಎನ್ ಮಜಿಕೋಡಿ ಇವರು ಆಯ್ಕೆಯಾದರು .
ಕ್ರೀಡಾ ಕಾರ್ಯದರ್ಶಿಯಾಗಿ ರಜತ್ (ಹರ್ಷಿತ್) ಮಜಿಕೋಡಿ ಮತ್ತು ಪ್ರಣೀತ್ ಕುಂಬಳಚೇರಿ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಾಜೇಶ್ ವಿ ಕುಂಬಳಚೇರಿ ಮತ್ತು ಪುನೀತ್ ನೆಕ್ಕಿಲ ಹಾಗೂ ನಿರ್ದೇಶಕರಾಗಿ ಹೇಮಕುಮಾರ ಕುಂಬಳಚೇರಿ ಇವರನ್ನು ಆಯ್ಕೆ ಮಾಡಲಾಯಿತು . ಕಾರ್ಯಕ್ರಮವನ್ನು ಶೀತಲ್ ಕುಂಬಳಚೇರಿ ಪ್ರಾರ್ಥಿಸಿ ,ಕಾರ್ಯದರ್ಶಿ ಜೀವನ್ ಮಜಿಕೋಡಿ ಸ್ವಾಗತಿಸಿ ಕೋಶಾಧಿಕಾರಿ ಪ್ರವೀಣ್ ಮಜಿಕೋಡಿ ವಂದಿಸಿದರು.
ಈ ಸಂದರ್ಭ ಸಂಘದ ಉಪಾಧ್ಯಕ್ಷ ಪ್ರದೀಪ್ ಕುಂಬಳಚೇರಿ , ಸಂಘದ ಮಾಜಿ ಅಧ್ಯಕ್ಷರು ಪದಾಧಿಕಾರಿಗಳು ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.