ಸಂಪಾಜೆ ಪಯಸ್ವಿನಿ ಸಹಕಾರಿ ಸಂಘದಿಂದ ಸಂತ್ರಸ್ತ ಬಾಲಕನಿಗೆ ನೆರವು

0

ಕೊಡಗು ಸಂಪಾಜೆಯ ಹಾಸ್ಟೆಲ್ ನಲ್ಲಿ ಮರ್ಮಾಂಗಕ್ಕೆ ಏಟಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತ ಬಾಲಕನಿಗೆ ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ಅದ್ಯಕ್ಷರಾದ ಎನ್‌.ಸಿ. ಅನಂತ್ ಊರುಬೈಲುರವರು ಭೇಟಿ ಮಾಡಿ , ಸಾಂತ್ವನ ಹೇಳಿ ,ಧೈರ್ಯ ತುಂಬಿ ಆರ್ಥಿಕ ನೆರವು ನೀಡಿ ,ಶೀಘ್ರ ಚೇತರಿಕೆಗಾಗಿ ಹಾರೈಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಕೆ.ಆನಂದ ,ನಿರ್ದೇಶಕಿ ಶ್ರೀಮತಿ ವಾಣಿ ಜಗದೀಶ್ ಮತ್ತು ಸುಜಿತ್ ಕಟ್ಟಕೋಡಿ ಉಪಸ್ಥಿತರಿದ್ದರು.