ಗೂನಡ್ಕ:: ಅಪಘಾತದ ಗಾಯಾಳುವಿಗೆ ಉಚಿತ ಅಂಬ್ಯುಲೆನ್ಸ್ ಸೇವೆ

0

ದ.ಕ. ಸಂಪಾಜೆ ಗ್ರಾಮದ ಗೂನಡ್ಕದಲ್ಲಿ ಸೆ.24ರಂದು ಬೆಳಿಗ್ಗೆ ಸಂಭವಿಸಿದ ಸ್ಕೂಟಿ ಹಾಗೂ ಕಂಟೈನರ್ ಲಾರಿ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಕಾಸರಗೋಡು ಮೂಲದ ಸ್ಕೂಟಿ ಸವಾರ ಯುವಕನ ಪ್ರಥಮ ಚಿಕಿತ್ಸೆಗಾಗಿ ಸುಳ್ಯದ ಕೆವಿಜಿ ಆಸ್ಪತ್ರೆಗೆ AIKMCC ಸುಳ್ಯದ ಅಂಬುಲನ್ಸ್ ನಲ್ಲಿ ಸಂಪಾಜೆಯ ತಾಜುದ್ದೀನ್ ಟರ್ಲಿ ಅವರು ಉಚಿತ ಸೇವೆ ನೀಡಿದರು.

ಗಾಯಾಳುವನ್ನು ಸುಳ್ಯದಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಗೆ ಸುಳ್ಯ ಲೈಫ್ ಕೇರ್ ಅಂಬುಲನ್ಸ್ ಸುಳ್ಯದ ರಫೀಕ್ ಕೆ.ಎಂ. ಅವರು ಉಚಿತ ಸೇವೆ ನೀಡಿದರು.


ಈ ರೀತಿಯಾಗಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಉಚಿತ ಸೇವೆ ನೀಡಿದ ಸುಳ್ಯದ ಅಂಬ್ಯುಲೆನ್ಸ್ ಚಾಲಕ -ಮಾಲಕರ ಸಂಘಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.