ಹರಿಹರ: ಕೆಸರುಗದ್ದೆ ಕ್ರೀಡಾಕೂಟ ನಡೆದ ಗದ್ದೆಗೆ ನೇಜಿ ನೆಟ್ಟು ಕೊಟ್ಟ ಸ್ಥಳೀಯರು

0

ಹರಿಹರ ಪಲ್ಲತಡ್ಕದ ಕಿರಿಭಾಗ ಎಂಬಲ್ಲಿ ಕೆಸರು ಗದ್ದೆ ಕ್ರೀಡಾ ಕ್ರೀಡಾಕೂಟ ನಡೆಸಿದ ಗದ್ದೆಗೆ ಸಾರ್ವಜನಿಕರೇ ಸೇರಿ ನೇಜಿ ನೆಟ್ಟು ಕೊಟ್ಟ ಮಾದರಿ ಕಾರ್ಯ ಮಾಡಿದ್ದಾರೆ.

ಯೋಗಿಶ್ ಕಿರಿಭಾಗರವರಿಗೆ ಸೇರಿದ ಗದ್ದೆಯಲ್ಲಿ ಧ್ವನಿ ಮತ್ತು ಬೆಳಕು, ಶಾಮಿಯಾನ ಸಂಘಟನೆಯವರು ಹಾಗೂ ಬಾಳುಗೋಡು ವಿಶ್ವ ಯುವಕ ಮಂಡಲದವರು ಇತ್ತೀಚೆಗೆ ಬೇರೆ ಬೇರೆ ದಿನ ಕೆಸರುಗದ್ದೆ ಕ್ರೀಡಾ ಕೂಟ ನಡೆಸಿದ್ದರು.

ಇದೇ ಗದ್ದೆ ಪಾಳು ಬೀಳಲಿದ್ದು ಗದ್ದೆಯಲ್ಲಿ ನೇಜಿ ನೆಡುವ ಸಲುವಾಗಿ ರೇಗನ್ ಶೆಟ್ಯಡ್ಕ ನೇಜಿ ತರಿಸಿಕೊಟ್ಟಿದ್ದು ಸ್ಥಳಿಯರು ಸೇರಿ ನೇಜಿ ನೆಟ್ಟು ಕೊಟ್ಟಿದ್ದಾರೆ. ಗದ್ದೆಯೇ ಇಲ್ಲದ ಈ ಭಾಗದಲ್ಲಿ ಸದ್ಯಕ್ಕೆ ಇದೊಂದು ಗದ್ದೆ ಈ ಭಾಗದವರಿಗೆ ವರದಾನವಾಗಿದೆ .