ಅಖಿಲ ಭಾರತ ಸಂತ ಸಮಿತಿಯ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಗಿ ಮರ್ಕಂಜದ ರಾಜೇಶ್ ನಾಥ್ ಜಿ ನೇಮಕ

0

ಅಖಿಲ ಭಾರತ ಸಂತ ಸಮಿತಿಯ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಮರ್ಕಂಜದ ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರ ಯೋಗೀಶ್ವರ ಸಿದ್ಧಮಠದ ಧರ್ಮದರ್ಶಿ, ಕೊಡಗಿನ ಸಿದ್ದಲಿಂಗಪುರ ಅರಸಿನಕೊಪ್ಪೆಯ ಶ್ರೀ ಮಂಜುನಾಥ ಸ್ವಾಮಿ ಕ್ಷೇತ್ರದ ನಿರ್ಮಾಣ ಸಮಿತಿಯ ಗೌರವ ಸಲಹೆಗಾರರೂ ಕ್ಷೇತ್ರದ ಪ್ರಧಾನ ಗುರುಗಳಾದ ರಾಜೇಶ್ ನಾಥ್ ಜೀ ನೇಮಕಗೊಂಡಿದ್ದಾರೆ.

ಇತ್ತೀಚೆಗೆ ಮಂಗಳೂರಿನ ಓಂ ಶ್ರೀ ಮಠದಲ್ಲಿ ನಡೆದ ಅಖಿಲ ಭಾರತ ಸಂತ ಸಮಿತಿಯ ಕರ್ನಾಟಕ ರಾಜ್ಯ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದು ಪ್ರತಿಜ್ಞೆ ಭೋದಿಸಲಾಯಿತು.

ರಾಜೇಶ್‌ನಾಥ್ ಜೀಯವರು ಅಖಿಲಾ ಭಾರತ ಸಂತ ಸಮಿತಿ ಕೊಡಗು ಜಿಲ್ಲೆಯ ಅಧ್ಯಕ್ಷರಾಗಿದ್ದರು. ಇದೀಗ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.

ರಾಜೇಶ್ ನಾಥ್ ಜೀಯವರು ಕುಶಾಲನಗರ ಸಿದ್ಧನಾಥೇಶ್ವರ ದೇವಸ್ಥಾನ, ವೈದ್ಯನಾಥೇಶ್ವರ ದೇವಸ್ಥಾನ, ನಾಗನಾಥೇಶ್ವರ ದೇವಸ್ಥಾನಗಳ ಗೌರವಾಧ್ಯಕ್ಷರಾಗಿ, ದೇವಸ್ಥಾನ ನಿರ್ಮಾಣದ ಮಾರ್ಗದರ್ಶಕರಾಗಿ, ಸಮಿತಿಯ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ಹಿಂದೂ ಸಂಘಟನೆ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗಮಂಡಲ, ಮೈಸೂರು, ಬೆಂಗಳೂರು‌ ಕಡೆಗಳ‌ ದೇವಸ್ಥಾನಗಳಲ್ಲಿಯೂ ತನ್ನನ್ನು ತೊಡಗಿಸಿಕೊಂಡಿದ್ದಾರೆ.