ಪಂಜ:ವಿಶ್ವ ಶಾಂತಿ ದಿನಾಚರಣೆ ಮತ್ತು ವಿಸ್ತ್ರ್ ತ ಸಂಚಿಕೆ ಬಿಡುಗಡೆ ಕಾರ್ಯಕ್ರಮ .

0

ಪಂಜ ಲಯನ್ಸ್ ಕ್ಲಬ್ ಆಶ್ರಯದಲ್ಲಿ ವಿಶ್ವ ಶಾಂತಿ ದಿನಾಚರಣೆ ಮತ್ತು ವಿಸ್ತ್ರ್ ತ ಲಯನ್ಸ್ ಸಂಚಿಕೆ ಇದರ ಬಿಡುಗಡೆ ಕಾರ್ಯಕ್ರಮ ಪಂಜ ಲಯನ್ಸ್ ಭವನದಲ್ಲಿ ಸೆ.25 ರಂದು ನಡೆಯಿತು.

ಲಯನ್ಸ್ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಶ್ರೇಯಾಂಸ್ ಕುಮಾರ್ ಶೆಟ್ಟಿಮೂಲೆ ವಿಶ್ವ ಶಾಂತಿಯ ಹಾಗೂ ಆಂತರಿಕ ಭದ್ರತೆ ಬಗ್ಗೆ ಉಪನ್ಯಾಸ ನೀಡಿದರು.

ಪ್ರಾಂತ್ಯ 5 ರ ವಲಯ 1ರ ವಲಯಾಧ್ಯಕ್ಷೆ ರೂಪಶ್ರೀ ಜೆ ರೈ ವಿಸ್ತ್ರ್ ತ ಲಯನ್ಸ್ ಸಂಚಿಕೆ ಬಿಡುಗಡೆ ಗೊಳಿಸಿದರು.

ಕ್ಲಬ್ ನ ಅಧ್ಯಕ್ಷ ಶಶಿಧರ್
ಪಳಂಗಾಯ ಸಭಾಧ್ಯಕ್ಷತೆ ವಹಿಸಿದ್ದರು

ನಿಕಟ ಪೂರ್ವಾಧ್ಯಕ್ಷ ದಿಲೀಪ್ ಬಾಬ್ಲಬೆಟ್ಟು ,ಕಾರ್ಯದರ್ಶಿ ಮೋಹನ್ ದಾಸ್ ಕೂಟಾಜೆ ,ಕೋಶಾಧಿಕಾರಿ ಸುರೇಶ್ ನಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಪೂರ್ವ ಪ್ರಾಂತೀಯ ಅಧ್ಯಕ್ಷ ಜಯಂತ ರೈ ಸುಳ್ಯ,ಗುತ್ತಿಗಾರು ಲಯನ್ಸ್ ಕ್ಲಬ್ ಅಧ್ಯಕ್ಷ ಟಿ.ಕುಶಾಲಪ್ಪ ಗೌಡ ಹಾಗೂ ಪಂಜ ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷರುಗಳು ಹಾಗೂ ಸದಸ್ಯರು ಹಾಜರಿದ್ದರು.


ಕಾರ್ಯಕ್ರಮದಲ್ಲಿ ದಿಲೀಪ್ ಬಾಬ್ಲಬೆಟ್ಟು ಸ್ವಾಗತಿಸಿದರು.ಬಾಲಕೃಷ್ಣ ಮೂಲೆಮನೆ ವೇದಿಕೆಗೆ ಆಹ್ವಾನಿಸಿದರು.ಆನಂದ ಜಳಕದ ಹೊಳೆ ಲಯನ್ಸ್ ಪ್ರಾರ್ಥನೆ ಮತ್ತು ಪ್ರಜ್ವಲ್ ಬಿಳಿಮಲೆ ಲಯನ್ಸ್ ನೀತಿಸಂಹಿತೆ ವಾಚಿಸಿದರು. ಕರುಣಾಕರ ಎಣ್ಣೆಮಜಲು ಅತಿಥಿಗಳ ಪರಿಚಯಿಸಿದರು.ಮೋಹನ್ ಕೂಟಾಜೆ ವಂದಿಸಿದರು.