ವಿಶ್ವನಾಥ ನಡುಮುಟ್ಲು ಹೃದಯಾಘಾತದಿಂದ ನಿಧನ

0

ಉಬರಡ್ಕ ಮಿತ್ತೂರು ಗ್ರಾಮದ ಗಬ್ಬಡ್ಕ ವಿಶ್ವನಾಥ ನಡುಮುಟ್ಲು ರವರು ಹೃದಯಘಾತದಿಂದ ಸೆ.28ರಂದು ನಿಧನರಾದರು.

ಅವರಿಗೆ 73 ವರ್ಷ ವಯಸ್ಸಾಗಿತ್ತು.

ಮಧ್ಯಾಹ್ನದ ವೇಳೆ ತನ್ನ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಹೃದಯಘಾತಕ್ಕೊಳಗಾದ ಅವರನ್ನು ಸುಳ್ಯದ ಆಸ್ಪತ್ರೆಗೆ ಕರೆತರಲಾದರೂ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

ವಿಶ್ವನಾಥ ಗೌಡರು ಸುಳ್ಯದ ಸರಕಾರಿ ಪದವಿಪೂರ್ವ ಕಾಲೇಜು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಉದ್ಯೋಗಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ಮೃತರು ಪತ್ನಿ ಸೀತಾಲಕ್ಷ್ಮಿ, ಪುತ್ರರಾದ ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ಉದ್ಯೋಗಿಯಾಗಿರುವ ಅನಿಲ್, ಬೆಂಗಳೂರಿನಲ್ಲಿ ಖಾಸಗಿ ಕಂಪನಿ ಉದ್ಯೋಗಿಯಾಗಿರುವ ತೇಜಸ್, ಪುತ್ರಿ ಚೈತ್ರ ಮಹೇಶ್ ಕುದ್ಕುಳಿ, ಮೊಮ್ಮಗ, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ