ಅಜ್ಜಾವರ ಪ್ರತಾಪ ಯುವಕ ಮಂಡಲ ಅಧ್ಯಕ್ಷರಾಗಿ ಗುರುರಾಜ್ ಅಜ್ಜಾವರ ಪುನರಾಯ್ಕೆ

0

ಪ್ರತಾಪ ಯುವಕ ಮಂಡಲ (ರಿ) ಅಜ್ಜಾವರ ಇದರ ವಾರ್ಷಿಕ ಸಭೆ ಮತ್ತು ನೂತನ ಪದಾಧಿಕಾರಿಗಳು ಆಯ್ಕೆಗೊಂಡಿದ್ದು, 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಗುರುರಾಜ್ ಅಜ್ಜಾವರ ಮುಂದಿನ ಎರಡು ವರ್ಷಗಳ ಅವಧಿಗೆ ಪುನರ್ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಸೀತಾರಾಮ ಕೆ.ಪಿ ಕರ್ಲಪ್ಪಾಡಿ, ಅರುಣ್ ಕುಮಾರ್ ಅಡ್ಪಂಗಾಯ,ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಕೂಕ್ಲುಮಜಲು, ಖಜಾಂಚಿ ಲೋಕೇಶ್ ಮಾವಿನಪಳ್ಳ, ಜೊತೆ ಕಾರ್ಯದರ್ಶಿ ಅನಿಲ್ ರಾಜ್ ಕರ್ಲಪ್ಪಾಡಿ, ನೇಮಕಗೊಂಡರು. ಗೌರವ ಸಲಹೆಗಾರರಾಗಿ ಚನಿಯ ಕಲ್ತಡ್ಕ , ಸೂರ್ಯ ಕುಮಾರ್ ಅಡ್ಪಂಗಾಯ, ಸಾಂಸ್ಕೃತಿಕ ಕಾರ್ಯದರ್ಶಿ ಸುಧೀರ್ ಅಡ್ಪಂಗಾಯ, ಪತ್ರಿಕ ವರದಿಗಾರರಾಗಿ ರಮೇಶ್ ಮೇದಿನಡ್ಕ, ಕ್ರೀಡಾ ಕಾರ್ಯದರ್ಶಿಯಾಗಿ ಗೌರೀಶ್ ಅಡ್ಪಂಗಾಯ ನೇಮಕಗೊಂಡರು.

ನಿರ್ದೇಶಕರುಗಳಾಗಿ ಯತೀಶ್ ಪಡ್ಡಂ ಬೈಲು, ಹೇಮಂತ್ ಕುಮಾರ್ ಅಡ್ಪಂಗಾಯ, ವಿನಯ್ ನಾರಲು, ಗುರುವಪ್ಪ ಅಡ್ಪಂಗಾಯ ನೇಮಕಗೊಂಡರು. ವಾರ್ಷಿಕ ವರದಿಯನ್ನು ಅನಿಲ್ ರಾಜ್, ಲೋಕೇಶ್ ಮಾವಿನಪಳ್ಳ ಲೆಕ್ಕಪತ್ರ ಮಂಡಿಸಿದರು. ನವೀನ್ ಕುಮಾರ್ ಕೂಕ್ಲುಮಜಲು ಧನ್ಯವಾದ ಸಮರ್ಪಿಸಿದರು.