ನವಚೇತನ ಯುವಕಮಂಡಲ ಬೊಳುಬೈಲು ಇದರ ನೂತನ ಆಡಳಿತ ಮಂಡಳಿಯ ಪದಗ್ರಹಣ

0

ನವಚೇತನ ಯುವಕಮಂಡಲ(ರಿ) ಬೊಳುಬೈಲು ಇದರ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಸೆ 29ರಂದು ಯುವಕ ಮಂಡಲದ ಯುವಸದನದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಪ್ರಸಾದ್ ಕಾಟೂರು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಯುವಜನ ಸಂಯುಕ್ತ ಮಂಡಳಿ(ರಿ) ಸುಳ್ಯ ಇದರ ಅಧ್ಯಕ್ಷರಾದ ವಿಜಯಕುಮಾರ ಉಬರಡ್ಕ ಭಾಗವಹಿಸಿ ನೂತನ ಆಡಳಿತ ಮಂಡಳಿಯ ಪದಾದಿಕಾರಿಗಳಿಗೆ ಪ್ರಮಾಣವಚನ ಭೋದಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನಿತಿನ್ ಕುಮಾರ್ ಆರ್ಬಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನೂತನ ಅಧ್ಯಕ್ಷರಾಗಿ ಪ್ರದೀಪ್ ಬೊಳುಬೈಲು, ಉಪಾಧ್ಯಕ್ಷ ಧರ್ಮೆಶ್ ಕಾಯರಡ್ಕ, ಪ್ರಧಾನ ಕಾರ್ಯದರ್ಶಿ ಚಿತ್ತರಂಜನ್ ಕಾಟೂರು , ಕಾರ್ಯದರ್ಶಿನಿತೀನ್ ಬೊಳುಬೈಲು, ಕೋಶಾಧಿಕಾರಿ, ಭುವನ್ ಬೊಳುಬೈಲು, ಕ್ರೀಡಾ ಕಾರ್ಯದರ್ಶಿ ನಿತಿನ್ ಆರ್ಬಡ್ಕ, ಸಾಂಸ್ಕೃತಿಕ ಕಾರ್ಯದರ್ಶಿ ಹೇಮಂತ್ ಸುತ್ತುಕೊಟೆ ಆಯ್ಕೆಯಾದರು.
ಬಳಿಕ ಯುವಕಮಂಡಲ ಮುಂದಿನ ಕೆಲಸ ಕಾರ್ಯಗಳ ಬಗ್ಗೆ ಸಮಾಲೋಚನಾ ಸಭೆಯು ನೂತನ ಆಧ್ಯಕ್ಷರಾದ ಪ್ರದೀಪ್ ಬೊಳುಬೈಲು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. .ಕಾರ್ಯಕ್ರಮದಲ್ಲಿ ಸಂಸ್ಥೆಯ ಪೂರ್ವಧ್ಯಕ್ಷರುಗಳು, ನಿರ್ದೇಶಕರು,ಪದಾಧಿಕಾರಿಗಳು, ಸದಸ್ಯರುಗಳು, ಊರಿನ ಪ್ರಮುಖರು ಉಪಸ್ಥಿತರಿದ್ದರು.

ನಿತಿನ್ ಬೊಳುಬೈಲು ಸ್ವಾಗತಿಸಿ, ನಿರೂಪಿಸಿ ಧರ್ಮೇಶ ಕಾಯರಡ್ಕ , ಸುಧೀರ್ ರೈ ಕುಕ್ಕಂದೂರು ಧನ್ಯವಾದಿಸಿದರು.