ಬಾಳುಗೋಡು: ಒಬ್ಬಂಟಿಯಾಗಿದ್ದ ಯುವಕ ಮಲಗಿದಲ್ಲೇ ಶವ ವಾಗಿ ಪತ್ತೆ

0

ಎರಡು ದಿನಗಳ ಹಿಂದೆ ಮರಣ ಹೊಂದಿರುವ ಶಂಕೆ

ಬಾಳುಗೋಡು ಗ್ರಾಮದ ದಿl ಸೀತಾರಾಮ ಗೌಡ ಎಂಬವರ ಮಗ ಪವಿತ್ ಕಿರಿಭಾಗ ಎಂಬ ಯುವಕ ಇಂದು ಬೆಳಗ್ಗೆ ಮಲಗಿದಲ್ಲೇ ಶವವಾಗಿ ಮನೆಯಲ್ಲಿ ಪತ್ತೆಯಾಗಿದ್ದಾರೆ. ಅವರಿಗೆ 35 ವರ್ಷ ವಯಸ್ಸಾಗಿತ್ತು. ಕಳೆದ ಎರಡು ದಿನಗಳ ಹಿಂದೆ ಮರಣ ಹೊಂದಿರುವ ಸಂಖ್ಯೆ ವ್ಯಕ್ತವಾಗಿದ್ದು ಪವಿತ್ ಮೃತ ದೇಹ ಊದಿಹೋಗಿದ್ದು ಕೊಳೆಯುವ ಹಂತಕ್ಕೆ ತಲುಪಿರುವುದಾಗಿ ತಿಳಿದು ಬಂದಿದೆ.

ಪವಿತ್ ಮತ್ತು ಅವರ ಅಮ್ಮ ಇಬ್ಬರೇ ಮನೆಯಲ್ಲಿ ವಾಸವಿದ್ದು ಅವರ ತಾಯಿ ಕೆಲ ದಿನಗಳ ಹಿಂದೆ ಮೈಸೂರಿನಲ್ಲಿರುವ ತಮ್ಮ ಮಗಳ ಮನೆಗೆ ತೆರಳಿದ್ದರು. ಪವಿತ್ ಒಬ್ಬರೇ ಮನೆಯಲ್ಲಿದ್ದರು‌. ಅತಿಯಾದ ಮದ್ಯ ಸೇವನೆಯೇ ಮೃತ ಪಡಲು ಕಾರಣ ಎಂದು ನಂಬಲಾಗಿದೆ. ಸುಬ್ರಹ್ಮಣ್ಯ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಸ್ಥಳಕ್ಕೆ ಪೊಲೀಸರು ಬಂದಿರುವುದಾಗಿ ತಿಳಿದುಬಂದಿದೆ.