ಬೆಳ್ಳಾರೆ: ಪಡ್ಪು ಕಲ್ಪವೃಕ್ಷ ನವೋದಯ ಸ್ವಸಹಾಯ ಸಂಘ ವಾರ್ಷಿಕ ಮಹಾಸಭೆ

0

ಬೆಳ್ಳಾರೆಯ ಪಡ್ಪು ಕಲ್ಪವೃಕ್ಷ ನವೋದಯ ಸ್ವಸಹಾಯ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಸೆ‌. 29ರಂದು ಸಂಘದ ಸದಸ್ಯರಾದ ಪಡ್ಪು ಚಂದ್ರಕುಮಾರ್ ರವರ ಮನೆ ವಠಾರದಲ್ಲಿ ಜರುಗಿತು.


ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಶ್ರೀನಿವಾಸ ಕುರುಂಬುಡೇಲು ಮತ್ತು ವಾರ್ಷಿಕ ಲೆಕ್ಕಪತ್ರವನ್ನು ಅಧ್ಯಕ್ಷರಾದ ಆನಂದ ಗೌಡ ಪಡ್ಪು ಮಂಡಿಸಿದರು. ನಂತರ 2024- 25ರ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಶ್ರೀನಿವಾಸ ಕುರುಂಬುಡೇಲು, ಕಾರ್ಯದರ್ಶಿಯಾಗಿ ಚಂದ್ರಕುಮಾರ್ ಪಡ್ಪು ಆಯ್ಕೆಯಾದರು. ಚಂದ್ರಶೇಖರ ಕುಲಾಲ್ ಬಸ್ತಿಗುಡ್ಡೆ ಸ್ವಾಗತಿಸಿ, ಕೊರಗಪ್ಪ ಕುರುಂಬುಡೇಲು ವಂದಿಸಿದರು. ವಸಂತಗೌಡ ಪಡ್ಪು ಕಾರ್ಯಕ್ರಮ ನಿರೂಪಿಸಿದರು.