ಅಜ್ಜಾವರ ಮಹಿಷ ಮರ್ದಿನಿ ದೇವಸ್ಥಾನದಲ್ಲಿ ಮಕ್ಕಳ ಭಜನಾ ತರಬೇತಿ ಶಿಬಿರ ಮತ್ತು ಸಂಸ್ಕಾರ ಶಿಬಿರ

0

ಅಜ್ಜಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಮತ್ತು ಮಾತೃಶಕ್ತಿ ದುರ್ಗಾವಾಹಿನಿ ಶಿವಾಜಿ ಶಾಖೆ ಅಜ್ಜಾವರ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಆಶ್ರಯದಲ್ಲಿ 8ದಿನಗಳ ಪರ್ಯಂತ ಭಜನಾ ತರಬೇತಿ ಶಿಬಿರವು ನಡೆಯುತ್ತಿದೆ.
1 ರಿಂದ 10 ನೇ ತರಗತಿಯ 156 ಮಕ್ಕಳು ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ತಾಲೂಕಿನ ಸಂಪನ್ಮೂಲ ವ್ಯಕ್ತಿ ಗಳು ಬಂದು ಕುಳಿತು ಮತ್ತು ಕುಣಿತ ಎರಡು ವಿಧದ ಭಜನೆಯ ತರಬೇತಿ ನೀಡುತ್ತಿದ್ದಾರೆ.


ಶಿಬಿರಕ್ಕೆ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಸದಸ್ಯೆ ಶಿಲ್ಪಾ ಸುದೇವ್, ಶಾಸ್ತಾವೇಶ್ವರ ದೇವಸ್ಥಾನದ ಗೌರವ ಸಲಹೆಗಾರರಾದ ಕರುಣಾಕರ ಕೊಡಂಕಿರಿ ಕರ್ಲಪ್ಪಾಡಿ,ಸಿ.ಎ.ಬ್ಯಾಂಕ್ ನಿರ್ದೇಶಕ ಪ್ರಭೋದ್ ಶೆಟ್ಟಿ ಮೇನಾಲ,ಭಜನಾ ತರಬೇತುದಾರ ಶಿವಪ್ರಸಾದ್ ಆಲೆಟ್ಟಿ, ಆನಂದ ಬಳ್ಪ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರತಾಪ ಯು.ಮಂ. ಅಧ್ಯಕ್ಷ ಗುರುರಾಜ್ ಅಜ್ಜಾವರ, ಶಿವಾಜಿ ಶಾಖೆಯ ಪ್ರಮುಖ್ ನಾರಾಯಣ ಬಂಟರ ಬೈಲು, ವಿನಯ್ ಹಾಗೂ ದುರ್ಗವಾಹಿನಿ ಪ್ರಮುಖರು, ಮಾತೃ ಶಕ್ತಿ ಪ್ರಮುಖರು ಉಪಸ್ಥಿತರಿದ್ದರು.
ಚೈತ್ರ ಯವತಿ ಮಂಡಲದ ಅಧ್ಯಕ್ಷ ಶ್ರೀಮತಿ
ಶಶ್ಮಿ ಭಟ್ ಸ್ವಾಗತಿಸಿ, ದುರ್ಗವಾಹಿನಿ ಸಂಯೋಜಕಿ ಶ್ರೀಮತಿ ವಿಶಾಲ ಸೀತಾರಾಮ ಕರ್ಲಪಾಡಿ ವಂದಿಸಿದರು.

u