ಎಲಿಮಲೆ : ಮನೆ ಮನೆ ಭಜನಾ ಕಾರ್ಯಕ್ರಮ ಉದ್ಘಾಟನೆ

0

ವಿಶ್ವ ಹಿಂದೂ ಪರಿಷತ್ ಭಜರಂಗ ದಳ ಮಾತೃಶಕ್ತಿ ದುರ್ಗಾವಾಹಿನಿ ಅಯೋದ್ಯೆ ಘಟಕ ಎಲಿಮಲೆ ಹಾಗೂ ಆಂಜನೇಯ ಘಟಕ ತಲೂರು ಇದರ ಆಶ್ರಯದಲ್ಲಿ ಮನೆ ಮನೆ ಭಜನೆ ಕಾರ್ಯಕ್ರಮದ ಉದ್ಘಾಟನೆ ಚಂದ್ರಶೇಖರ ತಲೂರು ಇವರ ಮನೆಯಲ್ಲಿ ನಡೆಯಿತು.

ಸಂಘಟನೆ ಹಾಗೂ ಭಜನೆಯ ಮಹತ್ವವನ್ನು ರಾಷ್ಟೀಯ ಸ್ವಯಂ ಸೇವಕ ಸಂಘ ಇದರ ತಾಲ್ಲೂಕು ಸಂಘ ಚಾಲಕರದ ಚಂದ್ರಶೇಖರ ತಲೂರು ಮಾತನಾಡಿದರು.

ಭಜನೆಯ ಉದ್ಘಾಟನೆಯನ್ನು ವಿಶ್ವ ಹಿಂದೂ ಪರಿಷತ್ ತಾಲೂಕು ಪ್ರಖಂಡದ ಅಧ್ಯಕ್ಷರಾದ ಸೋಮಶೇಖರ್ ಪೈಕ ನೆರವೇರಿಸಿದರು.

ತಾಲೂಕು ಸoಯೋಜಕರಾದ ಹರಿಪ್ರಸಾದ್ ಎಲಿಮಲೆ, ತಾಲೂಕು ಸತ್ಸಂಗ ಪ್ರಮುಖರಾದ ಸತೀಶ್ ಟಿ. ಎನ್., ತಾಲೂಕು ಗೋ ರಕ್ಷಾ ಪ್ರಮುಖರಾದ ಮಂಜುನಾಥ್ ಕಾಟೂರು, ಮುಕಂಡರಾದ ಎ. ವಿ. ತೀರ್ಥರಾಮ, ಕೃಷ್ಣಾನ್ನಯ್ಯ ಮೂಲೆತೋಟ, ಅಯೋದ್ಯೆ ಘಟಕ ಎಲಿಮಲೆ ಇದರ ಘಟಕದ ಅಧ್ಯಕ್ಷರಾದ ಬೊಜ್ಜಪ್ಪ ಗೌಡ, ಕಾರ್ಯದರ್ಶಿ ಸುನಿಲ್ ಎಲಿಮಲೆ, ಸಂಚಾಲಕರಾದ ಪ್ರಶಾಂತ್ ಅಂಬೆಕಲ್ಲು, ದುರ್ಗಾ ವಾಹಿನಿ ಸಂಯೋಜಕಿ ಜಯಂತಿ ಎಲಿಮಲೆ, ಮಾತೃ ಶಕ್ತಿ ಸಂಯೋಜಕಿ ಶಶಿಕಲಾ ಕಾಡುಜಬಳೆ, ಆಂಜನೇಯ ಘಟಕ ಇದರ ಅಧ್ಯಕ್ಷರಾದ ಜಯಂತ ತಲೂರು, ಕಾರ್ಯದರ್ಶಿ ವಿಜಯ ತಲೂರು, ಸಂಚಾಲಕ ಜೀವನ್ ತಲೂರು, ದುರ್ಗಾವಾಹಿನಿ ಸಂಯೋಜಕಿ ಯಶೋದಾ ಪಟ್ಟೆ, ದುರ್ಗಾವಾಹಿನಿ ಸoಯೋಜಕಿ ಅನಿತಾ ತಲೂರು ಹಾಗೂ ಎರಡು ಘಟಕದ ಪದಾಧಿಕಾರಿಗಳು ಮತ್ತು ಮಾತೆಯರು ಕಾರ್ಯಕರ್ತರು ಭಾಗವಹಿಸಿದರು. ಉದಯ ಚಳ್ಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.